<p><strong>ಅಬುಧಾಬಿ (ಪಿಟಿಐ): </strong>ಈ ಸಲದ ಐಪಿಎಲ್ ಹರಾಜಿನಲ್ಲಿ ಹೆಚ್ಚು ಮೌಲ್ಯ ಪಡೆದ ಬೌಲರ್ ಎಂಬ ಹೆಗ್ಗಳಿಕೆಯ ಪ್ಯಾಟ್ ಕಮಿನ್ಸ್ ಶುಕ್ರವಾರ ತಮ್ಮ ಬ್ಯಾಟಿಂಗ್ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಗೌರವ ಕಾಪಾಡಿದರು!</p>.<p>ಶೇಖ್ ಝಯೇದ್ ಕ್ರೀಡಾಂಗಣದಲ್ಲಿ 36 ಎಸೆತಗಳಲ್ಲಿ ಔಟಾಗದೇ 53 ರನ್ ಗಳಿಸಿದ ಅವರು ಕೆಕೆಆರ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 148 ರನ್ ಮೊತ್ತ ಗಳಿಸಲು ನೆರವಾದರು.</p>.<p>ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಬೌಲರ್ಗಳು ಕೊಟ್ಟ ಪೆಟ್ಟಿಗೆ ಕೇವಲ 61 ರನ್ಗಳಿಗೆ ಐದು ವಿಕೆಟ್ಗಳನ್ನು ತಂಡವು ಕಳೆದುಕೊಂಡಿತು. ಈ ಪಂದ್ಯದಿಂದ ನಾಯಕರಾಗಿ ಹೊಣೆ ವಹಿಸಿಕೊಂಡ ಏಯಾನ್ ಮಾರ್ಗನ್ (ಔಟಾಗದೆ 39; 29ಎಸೆತ) ಮತ್ತು ಕಮಿನ್ಸ್ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 87 ರನ್ ಸೇರಿಸಿದರು. ಅದರಿಂದಾಗಿ ತಂಡವು ಅಲ್ಪಮೊತ್ತದ ಆತಂಕದಿಂದ ಪಾರಾಯಿತು.</p>.<p>ಇಬ್ಬರೂ ತಲಾ ಎರಡು ಸಿಕ್ಸರ್ ಹೊಡೆದರು. ಮಾರ್ಗನ್ ಮತ್ತು ಕಮಿನ್ಸ್ ಕ್ರಮವಾಗಿ ಎರಡು ಮತ್ತು ಐದು ಬೌಂಡರಿ ಗಳಿಸಿದರು.</p>.<p>ನಿಕಟಪೂರ್ವ ನಾಯಕ ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಒಂದಂಕಿ ಗಳಿಸಿದ್ದರಿಂದ ತಂಡವು ಸಂಕಷ್ಟದಲ್ಲಿತ್ತು. ಶುಭಮನ್ ಗಿಲ್ (21) ಮತ್ತು ಆ್ಯಂಡ್ರೆ ರಸೆಲ್ (12) ಎರಡಂಕಿ ಮೊತ್ತ ಗಳಿಸಿದರಾದರೂ ತಂಡದ ಚೇತರಿಕೆಗೆ ಪ್ರಯತ್ನಿಸಲಿಲ್ಲ.</p>.<p>ಮುಂಬೈ ತಂಡದ ಟ್ರೆಂಟ್ ಬೌಲ್ಟ್, ಕೌಲ್ಟರ್ ನೈಲ್ ಮತ್ತು ಜಸ್ಪ್ರೀತ್ ಬೂಮ್ರಾ ತಲಾ ಒಂದು ವಿಕೆಟ್ ಗಳಿಸಿದರೆ, ರಾಹುಲ್ ಚಾಹರ್ ಎರಡು ವಿಕೆಟ್ ಕಿತ್ತು ಕೆಕೆಆರ್ ತಂಡದ ರನ್ ಗಳಿಕಗೆ ಅಡ್ಡಗಾಲು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಬುಧಾಬಿ (ಪಿಟಿಐ): </strong>ಈ ಸಲದ ಐಪಿಎಲ್ ಹರಾಜಿನಲ್ಲಿ ಹೆಚ್ಚು ಮೌಲ್ಯ ಪಡೆದ ಬೌಲರ್ ಎಂಬ ಹೆಗ್ಗಳಿಕೆಯ ಪ್ಯಾಟ್ ಕಮಿನ್ಸ್ ಶುಕ್ರವಾರ ತಮ್ಮ ಬ್ಯಾಟಿಂಗ್ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಗೌರವ ಕಾಪಾಡಿದರು!</p>.<p>ಶೇಖ್ ಝಯೇದ್ ಕ್ರೀಡಾಂಗಣದಲ್ಲಿ 36 ಎಸೆತಗಳಲ್ಲಿ ಔಟಾಗದೇ 53 ರನ್ ಗಳಿಸಿದ ಅವರು ಕೆಕೆಆರ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 148 ರನ್ ಮೊತ್ತ ಗಳಿಸಲು ನೆರವಾದರು.</p>.<p>ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಬೌಲರ್ಗಳು ಕೊಟ್ಟ ಪೆಟ್ಟಿಗೆ ಕೇವಲ 61 ರನ್ಗಳಿಗೆ ಐದು ವಿಕೆಟ್ಗಳನ್ನು ತಂಡವು ಕಳೆದುಕೊಂಡಿತು. ಈ ಪಂದ್ಯದಿಂದ ನಾಯಕರಾಗಿ ಹೊಣೆ ವಹಿಸಿಕೊಂಡ ಏಯಾನ್ ಮಾರ್ಗನ್ (ಔಟಾಗದೆ 39; 29ಎಸೆತ) ಮತ್ತು ಕಮಿನ್ಸ್ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 87 ರನ್ ಸೇರಿಸಿದರು. ಅದರಿಂದಾಗಿ ತಂಡವು ಅಲ್ಪಮೊತ್ತದ ಆತಂಕದಿಂದ ಪಾರಾಯಿತು.</p>.<p>ಇಬ್ಬರೂ ತಲಾ ಎರಡು ಸಿಕ್ಸರ್ ಹೊಡೆದರು. ಮಾರ್ಗನ್ ಮತ್ತು ಕಮಿನ್ಸ್ ಕ್ರಮವಾಗಿ ಎರಡು ಮತ್ತು ಐದು ಬೌಂಡರಿ ಗಳಿಸಿದರು.</p>.<p>ನಿಕಟಪೂರ್ವ ನಾಯಕ ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಒಂದಂಕಿ ಗಳಿಸಿದ್ದರಿಂದ ತಂಡವು ಸಂಕಷ್ಟದಲ್ಲಿತ್ತು. ಶುಭಮನ್ ಗಿಲ್ (21) ಮತ್ತು ಆ್ಯಂಡ್ರೆ ರಸೆಲ್ (12) ಎರಡಂಕಿ ಮೊತ್ತ ಗಳಿಸಿದರಾದರೂ ತಂಡದ ಚೇತರಿಕೆಗೆ ಪ್ರಯತ್ನಿಸಲಿಲ್ಲ.</p>.<p>ಮುಂಬೈ ತಂಡದ ಟ್ರೆಂಟ್ ಬೌಲ್ಟ್, ಕೌಲ್ಟರ್ ನೈಲ್ ಮತ್ತು ಜಸ್ಪ್ರೀತ್ ಬೂಮ್ರಾ ತಲಾ ಒಂದು ವಿಕೆಟ್ ಗಳಿಸಿದರೆ, ರಾಹುಲ್ ಚಾಹರ್ ಎರಡು ವಿಕೆಟ್ ಕಿತ್ತು ಕೆಕೆಆರ್ ತಂಡದ ರನ್ ಗಳಿಕಗೆ ಅಡ್ಡಗಾಲು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>