‘ಟಿ–20 ನಾಯಕನನ್ನು ಬದಲಾವಣೆ ಮಾಡುತ್ತಿರುವ ಬಿಸಿಸಿಐನ ಮುಂದಾಲೋಚನೆ ಸರಿಯಾಗಿಯೇ ಇದೆ. ಭಾರತ ತಂಡಕ್ಕೆ ಹೊಸ ನಾಯಕನನ್ನು ರೂಪಿಸಲು ಪ್ರಯತ್ನಿಸುತ್ತಿದ್ದರೆ ಕೆ.ಎಲ್. ರಾಹುಲ್ ಅವರನ್ನು ಪರಿಗಣಿಸಬಹುದು. ಇಲ್ಲಿಯವರೆಗೂ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇಂಗ್ಲೆಂಡ್ನಲ್ಲೂ ಅವರ ಪ್ರದರ್ಶನ ಗಮನ ಸೆಳೆದಿತ್ತು. ಐಪಿಎಲ್ ಮತ್ತು 50 ಓವರ್ಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಅವರ ಪ್ರದರ್ಶನ ಚೆನ್ನಾಗಿದೆ ಹಾಗಾಗಿ, ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಬಹುದು’ ಎಂದು ಸ್ಫೋರ್ಟ್ಸ್ ಥಕ್ ಕಾರ್ಯಕ್ರಮದಲ್ಲಿ ಗವಾಸ್ಕರ್ ಹೇಳಿದ್ದಾರೆ.