ಈಚೆಗೆ ನಡೆದ ಹರಾಜಿನಲ್ಲಿ ತಂಡವು ಅನುಭವಿ ಆಟಗಾರರಾದ ಶಿಖರ್ ಧವನ್, ಜಾನಿ ಬೆಸ್ಟೊ, ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ, ತಮಿಳುನಾಡಿನ ಬ್ಯಾಟರ್ ಶಾರೂಕ್ ಖಾನ್ ಮತ್ತು ಎಡಗೈ ಸ್ಪಿನ್ನರ್ ಹರಪ್ರೀತ್ ಬ್ರಾರ್ ಅವರನ್ನು ಖರೀದಿಸಿತ್ತು. ಧನವ್ ನಾಯಕರಾಗುವ ಕುರಿತು ಮಾತುಗಳು ಕೇಳಿಬಂದಿದ್ದವು. ಆದರೆ, ತಂಡದ ಆಡಳಿತವು ಮಯಂಕ್ ಅವರನ್ನು ನೇಮಕ ಮಾಡುವತ್ತ ಒಲವು ಹೊಂದಿದೆ ಎನ್ನಲಾಗಿದೆ.