‘ವಿಜಯ ಶಂಕರ್ ಬದಲಿಗೆ ಭಾರತ ತಂಡದ ಚಿಂತಕರ ಚಾವಡಿಯು, ಮಯಾಂಕ್ ಅವರನ್ನು ಕೇಳುವ ಸಾಧ್ಯತೆಯಿದೆ. ಅವರು ಆರಂಭ ಆಟಗಾರರಾಗಿರುವುದರಿಂದ, ಕೆ.ಎಲ್.ರಾಹುಲ್ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆಡಿಸಲು ಅವಕಾಶವಾಗಲಿದೆ. ಒಂದೊಮ್ಮೆ ರಿಷಭ್ ಪಂತ್ ಮುಂದಿನ ಎರಡು ಪಂದ್ಯಗಳಲ್ಲಿ ವಿಫಲರಾದರೆ ಆ ಸ್ಥಾನದಲ್ಲಿ ರಾಹುಲ್ ಆಡುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.