ಈಚೆಗೆ ಮಹಿಳಾ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಆಡಿದ್ದ ಭಾರತ ತಂಡದಿಂದ ಮಿಥಾಲಿ ರಾಜ್ ಅವರನ್ನು ಕೈಬಿಡಲಾಗಿತ್ತು. ಆ ಪಂದ್ಯದಲ್ಲಿಭಾರತ ತಂಡವು ಸೋತ ನಂತರ ಮಿಥಾಲಿಯನ್ನು ಆಯ್ಕೆ ಮಾಡದ ವಿಷಯ ವಿವಾದದ ರೂಪ ಪಡೆದಿತ್ತು. ಮಂಗಳವಾರ ಬಿಸಿಸಿಐಗೆ ಪತ್ರ ಬರೆದಿದ್ದ ಮಿಥಾಲಿ ಅವರು, ‘ರಮೇಶ್ ತಮ್ಮ ತೇಜೋವಧೆ ಮಾಡಿದ್ದಾರೆ’ ಎಂದು ಆರೋಪಿಸಿದ್ದರು. ಈ ಕುರಿತು ಬುಧವಾರ ರಮೇಶ್ ಅವರು ಬಿಸಿಸಿಐ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.