ಈಚೆಗೆ ಓವಲ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಶಾಸ್ತ್ರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಅದಾಗಿ ಒಂದೆರಡು ದಿನಗಳಲ್ಲಿ ಶಾಸ್ತ್ರಿ, ಫೀಲ್ಡಿಂಗ್ಕೋಚ್ ಆರ್. ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫಿಸಿಯೊ ನಿತಿನ್ ಪಟೇಲ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದರ ನಂತರ ಮ್ಯಾಂಚೆಸ್ಟರ್ನಲ್ಲಿ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನಾದಿನ ಭಾರತ ತಂಡದ ಸಹಾಯಕ ಫಿಸಿಯೊ ಯೋಗೇಶ್ ಪರ್ಮಾರ್ ಅವರಿಗೂ ಸೋಂಕು ಖಚಿತವಾಗಿತ್ತು. ಅದರಿಂದಾಗಿ ಪಂದ್ಯವನ್ನೇ ನಡೆಸಲಿಲ್ಲ. ಆಗ ರವಿಶಾಸ್ತ್ರಿ ಪುಸ್ತಕ ಸಮಾರಂಭದ ಬಗ್ಗೆ ಕೆಲವರು ಟೀಕೆ ಮಾಡಿದ್ದರು.