<p><strong>ಕರಾಚಿ</strong>: ಬೆರಗುಹುಟ್ಟಿಸುವ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೆಚ್ಚ ಕಡಿತದ ಕ್ರಮಕ್ಕೆ ಮುಂದಾಗಿದ್ದು, ದೇಶಿಯ ಕ್ರಿಕೆಟ್ನಲ್ಲಿ ಆಟಗಾರರ ಪಂದ್ಯ ಸಂಭಾವನೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದು ದೇಶದ ಅತ್ಯುನ್ನತ ಕ್ರೀಡಾಸಂಸ್ಥೆಯ ಹಣಕಾಸಿನ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.</p>.<p>ಮುಂಬರುವ ರಾಷ್ಟ್ರೀಯ ಟಿ20 ಚಾಂಪಿಯನ್ಷಿಪ್ನಲ್ಲಿ ಆಡುವ ಆಟಗಾರರ ಸಂಭಾವನೆಯನ್ನು ಪ್ರತಿ ಪಂದ್ಯಕ್ಕೆ 1,00,000 ರೂಪಾಯಿಗಳಿಂದ 10,000 ರೂ.ಗಳಿಗೆ ಇಳಿಸಲಾಗಿದೆ. ಮೀಸಲು ಆಟಗಾರರ ಸಂಭಾವನೆ 5000 ರೂ.ಗೆ ಇಳಿಯಲಿದೆ. ಈ ಟೂರ್ನಿ ಮಾರ್ಚ್ 14ರಂದು ಆರಂಭವಾಗಲಿದೆ.</p>.<p>ಪಂದ್ಯದ ಸಂಭಾವನೆಯಲ್ಲಿ ಭಾರಿ ಕಡಿತ ಆಗಿರುವುದು ಆಟಗಾರರಲ್ಲಿ ಕಳವಳ ಮೂಡಿಸಿದೆ. ದೇಶಿ ಕ್ರಿಕೆಟ್ಗೆ ಮಾಡುತ್ತಿರುವ ವೆಚ್ಚವನ್ನೂ ಗಣನೀಯವಾಗಿ ಕಡಿಮೆ ಮಾಡಲು ಮಂಡಳಿ ಮುಂದಾಗಿದೆ.</p>.<p>ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೇಶಿ ಕ್ರಿಕೆಟ್ನ ಮುಖ್ಯಸ್ಥರಾದ ಅಬ್ದುಲ್ಲಾ ಖುರ್ರಂ ನಿಯಾಝಿ ಅವರು ಕೆಲವು ತಿಂಗಳಿಂದ ದೇಶೀಯ ಕ್ರಿಕೆಟ್ ಆಟಗಾರರ ‘ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<p>‘ಮೊದಲು ಪಂಚತಾರಾ ಅಥವಾ ಫೋರ್ಸ್ಟಾರ್ ಹೋಟೆಲ್ ವಾಸ್ತವ್ಯಕ್ಕೆ ಇದ್ದ ಅವಕಾಶವನ್ನು ಈಗ ಕಡಿಮೆ ವೆಚ್ಚದ ಹೋಟೆಲ್ಗಳಿಗೆ ಸೀಮಿತಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೂ ಕಡಿವಾಣ ಹಾಕಲಾಗಿದೆ’ ಎಂದೂ ತಿಳಿಸಿವೆ.</p>.<p>ಆಟಗಾರರಿಗೆ ಮತ್ತು ಅಂಪೈರ್ಗಳಿಗೆ ಕಳೆದ ಋತುವಿನಲ್ಲಿ ನೀಡಬೇಕಾಗಿದ್ದ ಸಂಭಾವನೆಯ ಮೊತ್ತವನ್ನು ಇನ್ನೂ ಪಾವತಿಸಲಾಗಿಲ್ಲ ಎಂದು ಇನ್ನೊಂದು ಮೂಲ ತಿಳಿಸಿದೆ. ಮಂಡಳಿ ನಿಯಮದ ಪ್ರಕಾರ ಮಾಜಿ ಟೆಸ್ಟ್ ಆಟಗಾರರಿಗೆ ನೀಡಬೇಕಾಗಿರುವ ವಾರ್ಷಿಕ ಪಿಂಚಣಿ ಏರಿಕೆಯನ್ನು ಇನ್ನೂ ಜಾರಿಗೊಳಿಸಿಲ್ಲ ಎನ್ನಲಾಗಿದೆ.</p>.<p>ವಿಪರ್ಯಾಸ ಎಂದರೆ, ಆಟಗಾರರಿಗೆ ಸಂಭಾವನೆ ಕಡಿಮೆ ಮಾಡಿರುವ ಅಧಿಕಾರಿಗಳು ಮಾತ್ರ ತಿಂಗಳಿಗೆ ಲಕ್ಷಗಟ್ಟಲೆ ರೂಪಾಯಿ ವೇತನವಾಗಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಆಯ್ಕೆಗಾರರಿಗೆ ಮತ್ತು ಈಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯ ಐದು ಮಾರ್ಗದರ್ಶಕರಿಗೂ (ಮೆಂಟರ್) ಭಾರಿ ಮೊತ್ತ ಪಾವತಿಸಲಾಗಿದೆ.</p>.<p>ಮಿಸ್ಬಾ ಉಲ್ ಹಕ್, ವಕಾರ್ ಯೂನಿಸ್, ಶೋಯೆಬ್ ಮಲಿಕ್, ಸರ್ಫರಾಜ್ ಅಹ್ಮದ್ ಮತ್ತು ಸಕಲೇನ್ ಮುಷ್ತಾಕ್ ಅವರು ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ಮೆಂಟರ್ಗಳಾಗಿದ್ದು, ತಿಂಗಳಿಗೆ 50 ಲಕ್ಷ ರೂ. ಪಡೆದಿದ್ದಾರೆ.</p>.<p>ಲಾಹೋರ್ನ ಗಡ್ಡಾಫಿ ಕ್ರೀಡಾಂಗಣ, ಕರಾಚಿಯ ನ್ಯಾಷನಲ್ ಸ್ಟೇಡಿಯಂ ಮತ್ತು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಗಳ ನವೀಕರಣಕ್ಕೆ ಪಿಸಿಬಿ 1.8 ಶತಕೋಟಿ ರೂಪಾಯಿ ವೆಚ್ಚ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ</strong>: ಬೆರಗುಹುಟ್ಟಿಸುವ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೆಚ್ಚ ಕಡಿತದ ಕ್ರಮಕ್ಕೆ ಮುಂದಾಗಿದ್ದು, ದೇಶಿಯ ಕ್ರಿಕೆಟ್ನಲ್ಲಿ ಆಟಗಾರರ ಪಂದ್ಯ ಸಂಭಾವನೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದು ದೇಶದ ಅತ್ಯುನ್ನತ ಕ್ರೀಡಾಸಂಸ್ಥೆಯ ಹಣಕಾಸಿನ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.</p>.<p>ಮುಂಬರುವ ರಾಷ್ಟ್ರೀಯ ಟಿ20 ಚಾಂಪಿಯನ್ಷಿಪ್ನಲ್ಲಿ ಆಡುವ ಆಟಗಾರರ ಸಂಭಾವನೆಯನ್ನು ಪ್ರತಿ ಪಂದ್ಯಕ್ಕೆ 1,00,000 ರೂಪಾಯಿಗಳಿಂದ 10,000 ರೂ.ಗಳಿಗೆ ಇಳಿಸಲಾಗಿದೆ. ಮೀಸಲು ಆಟಗಾರರ ಸಂಭಾವನೆ 5000 ರೂ.ಗೆ ಇಳಿಯಲಿದೆ. ಈ ಟೂರ್ನಿ ಮಾರ್ಚ್ 14ರಂದು ಆರಂಭವಾಗಲಿದೆ.</p>.<p>ಪಂದ್ಯದ ಸಂಭಾವನೆಯಲ್ಲಿ ಭಾರಿ ಕಡಿತ ಆಗಿರುವುದು ಆಟಗಾರರಲ್ಲಿ ಕಳವಳ ಮೂಡಿಸಿದೆ. ದೇಶಿ ಕ್ರಿಕೆಟ್ಗೆ ಮಾಡುತ್ತಿರುವ ವೆಚ್ಚವನ್ನೂ ಗಣನೀಯವಾಗಿ ಕಡಿಮೆ ಮಾಡಲು ಮಂಡಳಿ ಮುಂದಾಗಿದೆ.</p>.<p>ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೇಶಿ ಕ್ರಿಕೆಟ್ನ ಮುಖ್ಯಸ್ಥರಾದ ಅಬ್ದುಲ್ಲಾ ಖುರ್ರಂ ನಿಯಾಝಿ ಅವರು ಕೆಲವು ತಿಂಗಳಿಂದ ದೇಶೀಯ ಕ್ರಿಕೆಟ್ ಆಟಗಾರರ ‘ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<p>‘ಮೊದಲು ಪಂಚತಾರಾ ಅಥವಾ ಫೋರ್ಸ್ಟಾರ್ ಹೋಟೆಲ್ ವಾಸ್ತವ್ಯಕ್ಕೆ ಇದ್ದ ಅವಕಾಶವನ್ನು ಈಗ ಕಡಿಮೆ ವೆಚ್ಚದ ಹೋಟೆಲ್ಗಳಿಗೆ ಸೀಮಿತಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೂ ಕಡಿವಾಣ ಹಾಕಲಾಗಿದೆ’ ಎಂದೂ ತಿಳಿಸಿವೆ.</p>.<p>ಆಟಗಾರರಿಗೆ ಮತ್ತು ಅಂಪೈರ್ಗಳಿಗೆ ಕಳೆದ ಋತುವಿನಲ್ಲಿ ನೀಡಬೇಕಾಗಿದ್ದ ಸಂಭಾವನೆಯ ಮೊತ್ತವನ್ನು ಇನ್ನೂ ಪಾವತಿಸಲಾಗಿಲ್ಲ ಎಂದು ಇನ್ನೊಂದು ಮೂಲ ತಿಳಿಸಿದೆ. ಮಂಡಳಿ ನಿಯಮದ ಪ್ರಕಾರ ಮಾಜಿ ಟೆಸ್ಟ್ ಆಟಗಾರರಿಗೆ ನೀಡಬೇಕಾಗಿರುವ ವಾರ್ಷಿಕ ಪಿಂಚಣಿ ಏರಿಕೆಯನ್ನು ಇನ್ನೂ ಜಾರಿಗೊಳಿಸಿಲ್ಲ ಎನ್ನಲಾಗಿದೆ.</p>.<p>ವಿಪರ್ಯಾಸ ಎಂದರೆ, ಆಟಗಾರರಿಗೆ ಸಂಭಾವನೆ ಕಡಿಮೆ ಮಾಡಿರುವ ಅಧಿಕಾರಿಗಳು ಮಾತ್ರ ತಿಂಗಳಿಗೆ ಲಕ್ಷಗಟ್ಟಲೆ ರೂಪಾಯಿ ವೇತನವಾಗಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಆಯ್ಕೆಗಾರರಿಗೆ ಮತ್ತು ಈಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯ ಐದು ಮಾರ್ಗದರ್ಶಕರಿಗೂ (ಮೆಂಟರ್) ಭಾರಿ ಮೊತ್ತ ಪಾವತಿಸಲಾಗಿದೆ.</p>.<p>ಮಿಸ್ಬಾ ಉಲ್ ಹಕ್, ವಕಾರ್ ಯೂನಿಸ್, ಶೋಯೆಬ್ ಮಲಿಕ್, ಸರ್ಫರಾಜ್ ಅಹ್ಮದ್ ಮತ್ತು ಸಕಲೇನ್ ಮುಷ್ತಾಕ್ ಅವರು ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ಮೆಂಟರ್ಗಳಾಗಿದ್ದು, ತಿಂಗಳಿಗೆ 50 ಲಕ್ಷ ರೂ. ಪಡೆದಿದ್ದಾರೆ.</p>.<p>ಲಾಹೋರ್ನ ಗಡ್ಡಾಫಿ ಕ್ರೀಡಾಂಗಣ, ಕರಾಚಿಯ ನ್ಯಾಷನಲ್ ಸ್ಟೇಡಿಯಂ ಮತ್ತು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಗಳ ನವೀಕರಣಕ್ಕೆ ಪಿಸಿಬಿ 1.8 ಶತಕೋಟಿ ರೂಪಾಯಿ ವೆಚ್ಚ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>