<p><strong>ಬೆಂಗಳೂರು</strong>: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿ ಕೆ. ಶ್ರೀರಾಮ್ ಅವರು ಆಯ್ಕೆಯಾದರು. </p>.<p>ಈ ಮೊದಲು ಉಪಾಧ್ಯಕ್ಷರಾಗಿದ್ದ ಸಂಪತ್ ಕುಮಾರ್ ಅವರು ಈಚೆಗಷ್ಟೇ 70ನೇ ವಸಂತಕ್ಕೆ ಕಾಲಿಟ್ಟರು. ಬಿಸಿಸಿಐ ನಿಯಮಾವಳಿ ಪ್ರಕಾರ 70 ವರ್ಷ ಮೇಲ್ಪಟ್ಟವರು ಪದಾಧಿಕಾರಿಯಾಗಿ ಮುಂದುವರಿಯುವಂತಿಲ್ಲ. ಆದ್ದರಿಂದ ಸಂಪತ್ ಅವರು ಸ್ಥಾನದಿಂದ ನಿರ್ಗಮಿಸಿದರು. </p>.<p>‘ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಶ್ರೀರಾಮ್ ಮತ್ತು ಉಮಾಮಹೇಶ್ವರ್ ಅವರು ಸ್ಪರ್ಧಿಸಿದ್ದರು. ಅದರಲ್ಲಿ ಶ್ರೀರಾಮ್ ಅವರು ಜಯಿಸಿದರು. ಒಟ್ಟು 705 ಮತಗಳು ಚಲಾವಣೆಗೊಂಡವು. ಶ್ರೀರಾಮ್ 500ಕ್ಕೂ ಹೆಚ್ಚು ಮತ ಗಳಿಸಿದರು’ ಎಂದು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಶ್ರೀರಾಮ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಹಿರಿಯ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. </p>.<p>‘ಕೆಎಸ್ಸಿಎಗೂ ನನಗೂ ಬಾಲ್ಯದಿಂದಲೂ ನಂಟಿದೆ. ನನ್ನ ತಂದೆ ಕಸ್ತೂರಿರಂಗನ್ ಅವರು ಪಿಚ್ ನಿರ್ಮಾತೃವಾಗಿದ್ದರು. ಅವರು ಕೂಡ ಕೆಎಸ್ಸಿಎಗೆ ಉಪಾಧ್ಯಕ್ಷರಾಗಿದ್ದರು. ಈಗ ನನಗೂ ಆ ಗೌರವ ಲಭಿಸಿದೆ. ರಾಜ್ಯದ ಕ್ರಿಕೆಟ್ಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ನನಗೆ ಸದಸ್ಯರು ಅವಕಾಶ ಕೊಟ್ಟಿದ್ದಾರೆ’ ಎಂದು ಶ್ರೀರಾಮ್ ಸಂತಸ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿ ಕೆ. ಶ್ರೀರಾಮ್ ಅವರು ಆಯ್ಕೆಯಾದರು. </p>.<p>ಈ ಮೊದಲು ಉಪಾಧ್ಯಕ್ಷರಾಗಿದ್ದ ಸಂಪತ್ ಕುಮಾರ್ ಅವರು ಈಚೆಗಷ್ಟೇ 70ನೇ ವಸಂತಕ್ಕೆ ಕಾಲಿಟ್ಟರು. ಬಿಸಿಸಿಐ ನಿಯಮಾವಳಿ ಪ್ರಕಾರ 70 ವರ್ಷ ಮೇಲ್ಪಟ್ಟವರು ಪದಾಧಿಕಾರಿಯಾಗಿ ಮುಂದುವರಿಯುವಂತಿಲ್ಲ. ಆದ್ದರಿಂದ ಸಂಪತ್ ಅವರು ಸ್ಥಾನದಿಂದ ನಿರ್ಗಮಿಸಿದರು. </p>.<p>‘ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಶ್ರೀರಾಮ್ ಮತ್ತು ಉಮಾಮಹೇಶ್ವರ್ ಅವರು ಸ್ಪರ್ಧಿಸಿದ್ದರು. ಅದರಲ್ಲಿ ಶ್ರೀರಾಮ್ ಅವರು ಜಯಿಸಿದರು. ಒಟ್ಟು 705 ಮತಗಳು ಚಲಾವಣೆಗೊಂಡವು. ಶ್ರೀರಾಮ್ 500ಕ್ಕೂ ಹೆಚ್ಚು ಮತ ಗಳಿಸಿದರು’ ಎಂದು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಶ್ರೀರಾಮ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಹಿರಿಯ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. </p>.<p>‘ಕೆಎಸ್ಸಿಎಗೂ ನನಗೂ ಬಾಲ್ಯದಿಂದಲೂ ನಂಟಿದೆ. ನನ್ನ ತಂದೆ ಕಸ್ತೂರಿರಂಗನ್ ಅವರು ಪಿಚ್ ನಿರ್ಮಾತೃವಾಗಿದ್ದರು. ಅವರು ಕೂಡ ಕೆಎಸ್ಸಿಎಗೆ ಉಪಾಧ್ಯಕ್ಷರಾಗಿದ್ದರು. ಈಗ ನನಗೂ ಆ ಗೌರವ ಲಭಿಸಿದೆ. ರಾಜ್ಯದ ಕ್ರಿಕೆಟ್ಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ನನಗೆ ಸದಸ್ಯರು ಅವಕಾಶ ಕೊಟ್ಟಿದ್ದಾರೆ’ ಎಂದು ಶ್ರೀರಾಮ್ ಸಂತಸ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>