<p><strong>ಬೆಂಗಳೂರು:</strong>ನಾಕೌಟ್ ಪ್ರವೇಶದ ದೃಷ್ಟಿಯಿಂದ ನಿರ್ಣಾಯಕವೆನಿಸಿದ್ದ ಪಂದ್ಯದಲ್ಲಿ ಮೊದಲ ದಿನ ಸಂಘಟಿತ ಪ್ರದರ್ಶನ ತೋರಿರುವ ಕರ್ನಾಟಕ ತಂಡ, ಬರೋಡ ಎದುರು ಇನಿಂಗ್ಸ್ ಮುನ್ನಡೆ ಸಾಧಿಸಿದೆ.</p>.<p>ಸುಲಭವಾಗಿ ನಾಕೌಟ್ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಬೇಕಾದ ಅಥವಾ ಇನಿಂಗ್ಸ್ ಮುನ್ನಡೆ ಸಾಧಿಸಲೇಬೇಕಾದ ಒತ್ತಡ ಕರ್ನಾಟಕ ಪಡೆಯ ಮೇಲಿತ್ತು. ಹಾಗಾಗಿ ಸದ್ಯ ದೊರೆತಿರುವ ಇನಿಂಗ್ಸ್ ಮುನ್ನಡೆಯು ಕರುಣ್ ನಾಯರ್ ಬಳಗಕ್ಕೆ ಉತ್ಸಾಹ ತುಂಬಿದೆ.</p>.<p>ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್, ಬರೋಡಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಬೌಲರ್ಗಳು ಬರೋಡ ಬಳಗವನ್ನು ಇನ್ನಿಲ್ಲದಂತೆ ಕಾಡಿದರು.</p>.<p>ಪ್ರವಾಸಿ ತಂಡದ ಅಹ್ಮದ್ನೂರ್ ಪಠಾಣ್(45) ಮತ್ತು ದೀಪಕ್ ಹೂಡಾ (20) ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ಎರಡಂಕಿ ಮುಟ್ಟಲಿಲ್ಲ. ನಾಯಕ ಕೃಣಾಲ್ ಪಾಂಡ್ಯ ಸೇರಿ ಒಟ್ಟು ಐವರು ಸೊನ್ನೆ ಸುತ್ತಿದರು. ಹೀಗಾಗಿ ಬರೋಡ ಕೇವಲ 85 ರನ್ ಗಳಿಗೆ ಆಲೌಟ್ ಆಯಿತು.</p>.<p>ವೇಗಿ ಅಭಿಮನ್ಯುಮಿಥುನ್ ಮತ್ತು ಸ್ಪಿನ್ನರ್ ಕೃಷ್ಣಪ್ಪ ಗೌತಮ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಪ್ರಸಿದ್ಧ ಕೃಷ್ಣ 2 ಹಾಗೂ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಪಡೆದರು.</p>.<p><strong>ಹೋರಾಟ ನಡೆಸಿದ ಬರೋಡ</strong><br />ಅಲ್ಪ ಮೊತ್ತಕ್ಕೆ ಕುಸಿದ ಬಳಿಕ ಬೌಲಿಂಗ್ನಲ್ಲಿ ಮೊನಚಿನ ದಾಳಿ ಸಂಘಟಿಸಿದ ಬರೋಡ, ಕೇವಲ 23 ರನ್ ಆಗುವಷ್ಟರಲ್ಲಿ ಆತಿಥೇಯರ 2 ವಿಕೆಟ್ ಕಬಳಿಸಿ ಆಘಾತ ನೀಡಿದರು. ಆದರೆ, ಮೂರನೇ ವಿಕೆಟ್ಗೆ 61 ರನ್ ಸೇರಿಸಿದಕರುಣ್ (47) ಮತ್ತು ಕೆ.ಸಿದ್ಧಾರ್ಥ್ (29) ಜೋಡಿ ಕುಸಿತಕ್ಕೆ ಬ್ರೇಕ್ ಹಾಕಿ ಇನಿಂಗ್ಸ್ ಮುನ್ನಡೆಯನ್ನೂ ತಂದುಕೊಟ್ಟಿತು.</p>.<p>ಸದ್ಯ ಮೊದಲ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿರುವ ಕರ್ನಾಟಕ ತಂಡ 80 ರನ್ಗಳ ಮುನ್ನಡೆಯಲ್ಲಿದೆ. 19 ರನ್ ಗಳಿಸಿರುವ ಆರ್. ಸಮರ್ಥ್ ಮತ್ತು 9 ರನ್ ಹೊಡೆದಿರುವ ಮಿಥುನ್ ಕ್ರೀಸ್ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.</p>.<p>ಉಳಿದ ಮೂರು ವಿಕೆಟ್ಗಳನ್ನು ಬೇಗನೆ ಕಬಳಿಸುವ ಯೋಜನೆಯಲ್ಲಿ ಕೃಣಾಲ್ ಪಡೆ ಇದ್ದರೆ,ಮುನ್ನಡೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಕರುಣ್ ಬಳಗದ ಲೆಕ್ಕಾಚಾರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ನಾಕೌಟ್ ಪ್ರವೇಶದ ದೃಷ್ಟಿಯಿಂದ ನಿರ್ಣಾಯಕವೆನಿಸಿದ್ದ ಪಂದ್ಯದಲ್ಲಿ ಮೊದಲ ದಿನ ಸಂಘಟಿತ ಪ್ರದರ್ಶನ ತೋರಿರುವ ಕರ್ನಾಟಕ ತಂಡ, ಬರೋಡ ಎದುರು ಇನಿಂಗ್ಸ್ ಮುನ್ನಡೆ ಸಾಧಿಸಿದೆ.</p>.<p>ಸುಲಭವಾಗಿ ನಾಕೌಟ್ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಬೇಕಾದ ಅಥವಾ ಇನಿಂಗ್ಸ್ ಮುನ್ನಡೆ ಸಾಧಿಸಲೇಬೇಕಾದ ಒತ್ತಡ ಕರ್ನಾಟಕ ಪಡೆಯ ಮೇಲಿತ್ತು. ಹಾಗಾಗಿ ಸದ್ಯ ದೊರೆತಿರುವ ಇನಿಂಗ್ಸ್ ಮುನ್ನಡೆಯು ಕರುಣ್ ನಾಯರ್ ಬಳಗಕ್ಕೆ ಉತ್ಸಾಹ ತುಂಬಿದೆ.</p>.<p>ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್, ಬರೋಡಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಬೌಲರ್ಗಳು ಬರೋಡ ಬಳಗವನ್ನು ಇನ್ನಿಲ್ಲದಂತೆ ಕಾಡಿದರು.</p>.<p>ಪ್ರವಾಸಿ ತಂಡದ ಅಹ್ಮದ್ನೂರ್ ಪಠಾಣ್(45) ಮತ್ತು ದೀಪಕ್ ಹೂಡಾ (20) ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ಎರಡಂಕಿ ಮುಟ್ಟಲಿಲ್ಲ. ನಾಯಕ ಕೃಣಾಲ್ ಪಾಂಡ್ಯ ಸೇರಿ ಒಟ್ಟು ಐವರು ಸೊನ್ನೆ ಸುತ್ತಿದರು. ಹೀಗಾಗಿ ಬರೋಡ ಕೇವಲ 85 ರನ್ ಗಳಿಗೆ ಆಲೌಟ್ ಆಯಿತು.</p>.<p>ವೇಗಿ ಅಭಿಮನ್ಯುಮಿಥುನ್ ಮತ್ತು ಸ್ಪಿನ್ನರ್ ಕೃಷ್ಣಪ್ಪ ಗೌತಮ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಪ್ರಸಿದ್ಧ ಕೃಷ್ಣ 2 ಹಾಗೂ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಪಡೆದರು.</p>.<p><strong>ಹೋರಾಟ ನಡೆಸಿದ ಬರೋಡ</strong><br />ಅಲ್ಪ ಮೊತ್ತಕ್ಕೆ ಕುಸಿದ ಬಳಿಕ ಬೌಲಿಂಗ್ನಲ್ಲಿ ಮೊನಚಿನ ದಾಳಿ ಸಂಘಟಿಸಿದ ಬರೋಡ, ಕೇವಲ 23 ರನ್ ಆಗುವಷ್ಟರಲ್ಲಿ ಆತಿಥೇಯರ 2 ವಿಕೆಟ್ ಕಬಳಿಸಿ ಆಘಾತ ನೀಡಿದರು. ಆದರೆ, ಮೂರನೇ ವಿಕೆಟ್ಗೆ 61 ರನ್ ಸೇರಿಸಿದಕರುಣ್ (47) ಮತ್ತು ಕೆ.ಸಿದ್ಧಾರ್ಥ್ (29) ಜೋಡಿ ಕುಸಿತಕ್ಕೆ ಬ್ರೇಕ್ ಹಾಕಿ ಇನಿಂಗ್ಸ್ ಮುನ್ನಡೆಯನ್ನೂ ತಂದುಕೊಟ್ಟಿತು.</p>.<p>ಸದ್ಯ ಮೊದಲ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿರುವ ಕರ್ನಾಟಕ ತಂಡ 80 ರನ್ಗಳ ಮುನ್ನಡೆಯಲ್ಲಿದೆ. 19 ರನ್ ಗಳಿಸಿರುವ ಆರ್. ಸಮರ್ಥ್ ಮತ್ತು 9 ರನ್ ಹೊಡೆದಿರುವ ಮಿಥುನ್ ಕ್ರೀಸ್ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.</p>.<p>ಉಳಿದ ಮೂರು ವಿಕೆಟ್ಗಳನ್ನು ಬೇಗನೆ ಕಬಳಿಸುವ ಯೋಜನೆಯಲ್ಲಿ ಕೃಣಾಲ್ ಪಡೆ ಇದ್ದರೆ,ಮುನ್ನಡೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಕರುಣ್ ಬಳಗದ ಲೆಕ್ಕಾಚಾರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>