ಈ ಮೊತ್ತೆದುರು ಬ್ಯಾಟಿಂಗ್ ಆರಂಭಿಸಿದ ಬಂಗಾಳ ಸದ್ಯ ಮೂರು ವಿಕೆಟ್ ಕಳೆದುಕೊಂಡು 134ರನ್ ಕಲೆಹಾಕಿದೆ. ಇನಿಂಗ್ಸ್ ಆರಂಭಿಸಿದ ನಾಯಕ ಅಭಿಮನ್ಯು ಈಶ್ವರನ್ (09) ಹಾಗೂ ಸುದೀಪ್ ಕುಮಾರ್ ಘರಾಮಿ (26)ತಂಡದ ಮೊತ್ತ 35 ಆಗಿದ್ದಾಗ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಸೌರಾಷ್ಟ್ರ ಪಾಳಯದಲ್ಲಿ ಮೂಡಿತ್ತು. ಆದರೆ, ಮೂರನೇ ವಿಕೆಟ್ಗೆ ಜೊತೆಯಾದ ಸುದೀಪ್ ಚಟರ್ಜಿ ಮತ್ತು ಮನೋಜ್ ತಿವಾರಿ ಅದಕ್ಕೆ ಅವಕಾಶ ನೀಡದಂತೆ ಆಡಿದರು.