ಬೆಂಗಳೂರು: ಸೋಮವಾರ ತಡವಾಗಿ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ನಲ್ಲಿ ಉತ್ತರಪ್ರದೇಶ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಕರ್ನಾಟಕ ಬ್ಯಾಟಿಂಗ್ ಮಾಡಲಿದೆ.
ಮಯಂಕ್ ಅಗರವಾಲ್ ಮತ್ತು ಆರ್ ಸಮರ್ಥ್ ಇನಿಂಗ್ಸ್ ಆರಂಭಿಸುವುದು ಖಚಿತ. ದೇವದತ್ತ ಪಡಿಕ್ಕಲ್ ಈ ಪಂದ್ಯದಲ್ಲಿ ಆಡುತ್ತಿಲ್ಲ ವೈಶಾಖ್ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವಕಾಶ ಗಳಿಸಿದ್ದಾರೆ.