<p><strong>ಬೆಂಗಳೂರು:</strong> ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಹರಿಯಾಣವನ್ನು ಎದುರಿಸುತ್ತಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ಗಳಿಸಿದೆ. </p><p>ಟಾಸ್ ಗೆದ್ದ ಹರಿಯಾಣ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಮೊದಲು ಬ್ಯಾಟ್ ಮಾಡಿತು. </p><p>ಕರ್ನಾಟಕದ ಪರ ಮಯಂಕ್ ಅಗರವಾಲ್ 91 ರನ್ಗಳಿಸಿದರು. ಪಡಿಕ್ಕಲ್ 43, ಸಮ್ರಾನ್ 35 ರನ್ ಹೊಡೆದು ಗಮನ ಸೆಳೆದರು. ಭರವಸೆ ಮೂಡಿಸಿದ್ದ ಕೆ. ಎಲ್ ರಾಹುಲ್ 26 ರನ್ಗಳಿಗೆ ಔಟಾದರು. </p><p>ವಿಕೆಟ್ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್ (18) ಬೌಲಿಂಗ್ ಆಲ್ರೌಂಡರ್ ಯಶೋವರ್ಧನ್ ಪರಂತಾಪ್ (27) ಅವರು ಕ್ರೀಸ್ನಲ್ಲಿದ್ದಾರೆ.</p><p>ಹರಿಯಾಣ ಪರ ಅನ್ಷುಲ್ ಕಾಂಭೋಜ್ ಹಾಗೂ ಅಂಜು ತಾಕ್ರಾಲ್ ತಲಾ 2 ವಿಕೆಟ್ ಪಡೆದರು</p><p>ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಹರಿಯಾಣದ ಎದುರಿನ ಈ ಪಂದ್ಯವು ಆತಿಥೇಯರಿಗೆ ನಿರ್ಣಾಯಕ. ಇದರಲ್ಲಿ ಸೋತರೆ ನಾಕೌಟ್ ಹಂತದ ಬಾಗಿಲು ಮುಚ್ಚಲಿದೆ. ಈ ಪಂದ್ಯದಲ್ಲಿ ಜಯಿಸುವುದರ ಜೊತೆಗೆ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೇರಳವು ಬಿಹಾರದ ವಿರುದ್ಧ ಸೋಲಬೇಕು ಅಥವಾ ಡ್ರಾ ಆಗಬೇಕು ಎಂದು ಪ್ರಾರ್ಥಿಸುವ ಅನಿವಾರ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಹರಿಯಾಣವನ್ನು ಎದುರಿಸುತ್ತಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ಗಳಿಸಿದೆ. </p><p>ಟಾಸ್ ಗೆದ್ದ ಹರಿಯಾಣ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಮೊದಲು ಬ್ಯಾಟ್ ಮಾಡಿತು. </p><p>ಕರ್ನಾಟಕದ ಪರ ಮಯಂಕ್ ಅಗರವಾಲ್ 91 ರನ್ಗಳಿಸಿದರು. ಪಡಿಕ್ಕಲ್ 43, ಸಮ್ರಾನ್ 35 ರನ್ ಹೊಡೆದು ಗಮನ ಸೆಳೆದರು. ಭರವಸೆ ಮೂಡಿಸಿದ್ದ ಕೆ. ಎಲ್ ರಾಹುಲ್ 26 ರನ್ಗಳಿಗೆ ಔಟಾದರು. </p><p>ವಿಕೆಟ್ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್ (18) ಬೌಲಿಂಗ್ ಆಲ್ರೌಂಡರ್ ಯಶೋವರ್ಧನ್ ಪರಂತಾಪ್ (27) ಅವರು ಕ್ರೀಸ್ನಲ್ಲಿದ್ದಾರೆ.</p><p>ಹರಿಯಾಣ ಪರ ಅನ್ಷುಲ್ ಕಾಂಭೋಜ್ ಹಾಗೂ ಅಂಜು ತಾಕ್ರಾಲ್ ತಲಾ 2 ವಿಕೆಟ್ ಪಡೆದರು</p><p>ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಹರಿಯಾಣದ ಎದುರಿನ ಈ ಪಂದ್ಯವು ಆತಿಥೇಯರಿಗೆ ನಿರ್ಣಾಯಕ. ಇದರಲ್ಲಿ ಸೋತರೆ ನಾಕೌಟ್ ಹಂತದ ಬಾಗಿಲು ಮುಚ್ಚಲಿದೆ. ಈ ಪಂದ್ಯದಲ್ಲಿ ಜಯಿಸುವುದರ ಜೊತೆಗೆ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೇರಳವು ಬಿಹಾರದ ವಿರುದ್ಧ ಸೋಲಬೇಕು ಅಥವಾ ಡ್ರಾ ಆಗಬೇಕು ಎಂದು ಪ್ರಾರ್ಥಿಸುವ ಅನಿವಾರ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>