<p><strong>ಶಿವಮೊಗ್ಗ:</strong> ಕರ್ನಾಟಕ ತಂಡದ ವೇಗಿಗಳು ಇಲ್ಲಿನ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಸೋಮವಾರದ ದಿನದಾಟದಲ್ಲಿ ನಾಲ್ಕು ವಿಕೆಟ್ ಉರುಳಿಸಿ ಗೋವಾ ತಂಡಕ್ಕೆ ಆಘಾತ ನೀಡಿದ್ದಾರೆ.</p><p>ತಾಜಾ ವರದಿಯ ವೇಳೆಗೆ ಗೋವಾ 24 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದು, 309 ರನ್ ಹಿನ್ನಡೆಯಲ್ಲಿದೆ. </p><p>ಕರ್ನಾಟಕದ ಪರ ವಿದ್ವತ್ ಕಾವೇರಪ್ಪ ಹಾಗೂ ಅಭಿಲಾಷ್ ಶೆಟ್ಟಿ ತಲಾ ಎರಡು ವಿಕೆಟ್ ಗಳಿಸಿದ್ದಾರೆ. </p><p>ಗೋವಾದ ಸುಯಶ್ ಎಸ್.ಪ್ರಭುದೇಸಾಯಿ 12, ಸ್ನೇಹಲ್ ಕೌತಂಕರ್ 10 ಮತ್ತು ಅಭಿನವ್ ತೇಜ್ರಾಣಾ 18 ರನ್ ಗಳಿಸಿ ಔಟ್ ಆದರು. ಚಂಡೀಗಢ ವಿರುದ್ಧದ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಅಭಿನವ್ ಇಲ್ಲಿ ವೈಫಲ್ಯ ಕಂಡರು. </p><p>ಈ ಮೊದಲು ಕರುಣ್ ನಾಯರ್ ಗಳಿಸಿದ ಅಮೋಘ ಶತಕದ (174*) ಬೆಂಬಲದೊಂದಿಗೆ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 371 ರನ್ ಪೇರಿಸಿತ್ತು. ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾಗಿತ್ತು. </p>.ICC Womens WC: ಸೆಮೀಸ್ನಲ್ಲಿ ಭಾರತಕ್ಕೆ ಬಲಿಷ್ಠ ಆಸೀಸ್ ಸವಾಲು.ರಣಜಿ ಟ್ರೋಫಿ: ಗೋವಾ ಬೌಲರ್ಗಳ ಕಾಡಿದ ಕರುಣ್ ನಾಯರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಕರ್ನಾಟಕ ತಂಡದ ವೇಗಿಗಳು ಇಲ್ಲಿನ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಸೋಮವಾರದ ದಿನದಾಟದಲ್ಲಿ ನಾಲ್ಕು ವಿಕೆಟ್ ಉರುಳಿಸಿ ಗೋವಾ ತಂಡಕ್ಕೆ ಆಘಾತ ನೀಡಿದ್ದಾರೆ.</p><p>ತಾಜಾ ವರದಿಯ ವೇಳೆಗೆ ಗೋವಾ 24 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದು, 309 ರನ್ ಹಿನ್ನಡೆಯಲ್ಲಿದೆ. </p><p>ಕರ್ನಾಟಕದ ಪರ ವಿದ್ವತ್ ಕಾವೇರಪ್ಪ ಹಾಗೂ ಅಭಿಲಾಷ್ ಶೆಟ್ಟಿ ತಲಾ ಎರಡು ವಿಕೆಟ್ ಗಳಿಸಿದ್ದಾರೆ. </p><p>ಗೋವಾದ ಸುಯಶ್ ಎಸ್.ಪ್ರಭುದೇಸಾಯಿ 12, ಸ್ನೇಹಲ್ ಕೌತಂಕರ್ 10 ಮತ್ತು ಅಭಿನವ್ ತೇಜ್ರಾಣಾ 18 ರನ್ ಗಳಿಸಿ ಔಟ್ ಆದರು. ಚಂಡೀಗಢ ವಿರುದ್ಧದ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಅಭಿನವ್ ಇಲ್ಲಿ ವೈಫಲ್ಯ ಕಂಡರು. </p><p>ಈ ಮೊದಲು ಕರುಣ್ ನಾಯರ್ ಗಳಿಸಿದ ಅಮೋಘ ಶತಕದ (174*) ಬೆಂಬಲದೊಂದಿಗೆ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 371 ರನ್ ಪೇರಿಸಿತ್ತು. ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾಗಿತ್ತು. </p>.ICC Womens WC: ಸೆಮೀಸ್ನಲ್ಲಿ ಭಾರತಕ್ಕೆ ಬಲಿಷ್ಠ ಆಸೀಸ್ ಸವಾಲು.ರಣಜಿ ಟ್ರೋಫಿ: ಗೋವಾ ಬೌಲರ್ಗಳ ಕಾಡಿದ ಕರುಣ್ ನಾಯರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>