‘ನಾನು ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಟ್ಟಣಗಳನ್ನು ಕೊಂಡೊಯ್ಯುತ್ತಿದ್ದೆ. ಕೆನರಾಬ್ಯಾಂಕ್ ತಂಡದ ನನ್ನ ಸ್ನೇಹಿತರಾದ ಭರತ್ ಚಿಪ್ಲಿ, ದೀಪಕ್ ಚೌಗುಲೆ, ಕೆ.ವಿ. ಸಿದ್ಧಾರ್ಥ್, ಶ್ರೀನಿವಾಸ್ ಮೂರ್ತಿ, ಸಿ. ರಘು, ಜಿ. ಚೈತ್ರಾ, ಕೆ.ಪಿ. ಅಪ್ಪಣ್ಣ, ಕೆ.ಬಿ. ಪವನ್, ಜಿ. ಬಾಲಾಜಿ, ಎಂ.ಜಿ. ನವೀನ್, ಮೊಹಮ್ಮದ್ ಸೈಫ್, ಎನ್.ಸಿ. ಅಯ್ಯಪ್ಪ, ಪಲ್ಲವಕುಮಾರ್ ದಾಸ್, ಜಿ. ಬಾಲಾಜಿ ಅವರೆಲ್ಲರೂ ನೆರವು ನೀಡುತ್ತಿದ್ದಾರೆ. ಲಾಕ್ಡೌನ್ ಆರಂಭವಾದಾಗಿನಿಂದಲೂ ಈ ಕೆಲಸ ಮಾಡ್ತಾ ಇದ್ದೇನೆ. ಇಲ್ಲಿಯವರೆಗೆ 350ಕ್ಕಿಂತ ಹೆಚ್ಚು ಜನರಿಗೆ ಕೊಟ್ಟಿದ್ದೇವೆ. ನಮ್ಮ ಸಹೋದ್ಯೋಗಿಗಳಾದ ರಾಜೇಶ್ವರಿ ಮತ್ತು ಜಯಲಕ್ಷ್ಮೀ ಅವರ ಸಹಾಯವೂ ಇದೆ. ಆದರೆ, ಬಹಳಷ್ಟು ಜನರಿಗೆ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಓಡಾಟಕ್ಕೆ ನಿರ್ಬಂಧಗಳಿವೆ. ಕಚೇರಿಗೆ ಹೋಗುವ ಮಾರ್ಗದಲ್ಲಿ ಮಾತ್ರ ಇದು ಸಾಧ್ಯವಾಗುತ್ತಿದೆ‘ ಎಂದು ರಾಜೂ ಹೇಳಿದರು.