228 ರನ್ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತವಾಯಿತು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು. ಕಗಿಸೊ ರಬಾಡ ಎಸೆತಕ್ಕೆ ಬೋಲ್ಡ್ ಆಗಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಕೇವಲ 1 ರನ್ ಗಳಿಸಿ ವಿಕೆಟ್ ಚೆಲ್ಲಿದರು. ದಿನೇಶ್ ಕಾರ್ತಿಕ್ (46) ಮತ್ತು ರಿಷಬ್ ಪಂತ್ (27) ರನ್ ಗತಿಯನ್ನು ವೃದ್ಧಿಸಲು ಶ್ರಮಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ (8), ಅಕ್ಷರ್ ಪಟೇಲ್ (9), ಹರ್ಷಲ್ ಪಟೇಲ್ (17), ಆರ್.ಅಶ್ವಿನ್ (2), ದೀಪಕ್ ಚಾಹರ್ (31), ಮೊಹಮ್ಮದ್ ಸಿರಾಚ್ (5) ಗೆಲುವಿನ ದಡ ಸೇರುವ ಯತ್ನದಲ್ಲಿ ಎಡವಿದರು. ಉಮೇಶ್ ಯಾದವ್ ಔಟಾಗದೆ 20 ರನ್ ಗಳಿಸಿದರು. ಅಂತಿಮವಾಗಿ ಇನ್ನೂ 9 ಎಸೆತಗಳು ಬಾಕಿಯಿರುವಂತೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.