ದೇಶದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಸಚಿವ ರಣಸಿಂಘೆ ಅವರು ‘ಕ್ರಿಕೆಟ್ ಮಂಡಳಿ ವಜಾಗೊಳಿಸಿರುವ ನಿರ್ಧಾರವನ್ನು ಅವರು ಬದಲಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. ‘ಅವರು (ಅಧ್ಯಕ್ಷ) ಮಧ್ಯಂತರ ಸಮಿತಿ ರದ್ದುಮಾಡಿ ಮತ್ತೆ ಹಳೆಯ ಮಂಡಳಿಗೆ ಅಧಿಕಾರ ನಾನು ನೀಡಬೇಕೆಂಬು ಅವರು ಬಯಸಿದ್ದರು. ಆದರೆ ನನ್ನನ್ನು ಬೇಕಾದರೆ ವಜಾಗೊಳಿಸಿ, ನನ್ನ ನಿರ್ಧಾರದಿಂದ ಹಿಂದೆಸರಿಯುವುದಿಲ್ಲ ಎಂದು ಅವರಿಗೆ ಹೇಳಿದ್ದೆ’ ಎಂದು ವಿರೋಧಪಕ್ಷಗಳ ಸ್ವಾಗತದ ಮಧ್ಯೆ ರಣಸಿಂಘೆ ಹೇಳಿರು.