ಗುರಿ ಬೆನ್ನಟ್ಟಿದ ಸರ್ವಿಸಸ್ ತಂಡಕ್ಕೆ ಆರಂಭದಲ್ಲಿಯೇ ಗೌತಮ್ ಮತ್ತು ಸುಚಿತ್ ಜೋಡಿಯು ಪೆಟ್ಟುಕೊಟ್ಟಿತು. ಇದರಿಂದಾಗಿ ಕೇವಲ 20 ರನ್ ಗಳಿಸುವಷ್ಟರಲ್ಲಿ ತಂಡವು ಎರಡು ವಿಕೆಟ್ ಕಳೆದುಕೊಂಡಿತ್ತು. ಗೆಹ್ಲೋಟ್ ರಾಹುಲ್ ಸಿಂಗ್ (34 ರನ್) ಮತ್ತು ಅಮಿತ್ ಪಚಾರ್ (23 ರನ್) ಅವರು ರನ್ ಗಳಿಸುವ ಪ್ರಯತ್ನ ಮಾಡಿದರು. ಆದರೆ, ಎಂಬಿ. ದರ್ಶನ್ ಮತ್ತು ವೈಶಾ ವಿಜಯಕುಮಾರ್ (3 ವಿಕೆಟ್) ಅವರ ಬೌಲಿಂಗ್ ಮುಂದೆ ಸರ್ವಿಸಸ್ ತಲೆಬಾಗಿತು.