'2011ರ ವಿಶ್ವಕಪ್ ಗೆಲುವನ್ನು ನಾನು ಮನೆಯಲ್ಲಿ ವೀಕ್ಷಿಸಿದ್ದೆ. ಭಾರತ ವಿಶ್ವಕಪ್ ಗೆದ್ದಾಗ ನನ್ನ ಚಿಂತನೆಯುಬದಲಾಯಿತು' ಎಂದು ಹೇಳಿದ್ದಾರೆ.
'ಆ ದಿನದ ಬಳಿಕ ನಾನು ಕೂಡ ಅದನ್ನೇ ಸಾಧಿಸುವ ಛಲ ಹೊಂದಿದ್ದೇನೆ. ನಾನು ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ. ಒಂದು, ಎರಡು ಅಥವಾ ಮೂರು, ಸಾಧ್ಯವಾದಷ್ಟು ಗೆಲ್ಲಬೇಕು. ವಿಶ್ವಕಪ್ನ ಭಾಗವಾಗಿ ಇತಿಹಾಸವನ್ನು ರಚಿಸಬೇಕು' ಎಂದು ಹೇಳಿದ್ದಾರೆ.
ಏತನ್ಮಧ್ಯೆ ಪ್ರಸಕ್ತ ಸಾಗುತ್ತಿರುವ ಟ್ವೆಂಟಿ-20 ವಿಶ್ವಕಪ್ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯವನ್ನು ಅನುಭವಿಸಿರುವ ಕೆ.ಎಲ್. ರಾಹುಲ್, ಅಫ್ಗಾನಿಸ್ತಾನ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಕೊನೆಗೂ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ.
ಈಗ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧವೂ ಉತ್ತಮ ಆಟ ಮುಂದುವರಿಸುವ ಇರಾದೆಯಲ್ಲಿದ್ದಾರೆ.