ನ್ಯೂಯಾರ್ಕ್: ಭಾರತ– ಪಾಕಿಸ್ತಾನ ಪಂದ್ಯಗಳಿಗೆ ಇರುವ ಅತಿಯಾದ ಪ್ರಚಾರ, ನಿರೀಕ್ಷೆ ಮತ್ತು ಒತ್ತಡಗಳು ಆಟಗಾರರಲ್ಲಿ ನರ್ವಸ್ (ಅಧೀರತೆ) ಉಂಟುಮಾಡುತ್ತದೆ ಎಂದು ಬಾಬರ್ ಆಜಂ ಹೇಳಿದ್ದಾರೆ. ತಮ್ಮ ತಂಡದ ಆಟಗಾರರು ಶಾಂತಚಿತ್ತರಾಗಿದ್ದುಕೊಂಡು, ಆಟದ ಮೂಲಭೂತ ಅಂಶಗಳ ಕಡೆಗಷ್ಟೇ ಗಮನಹರಿಸಬೇಕು ಎಂದು ಪಾಕಿಸ್ತಾನ ನಾಯಕ ಆಜಂ ಭಾನುವಾರ ಸಲಹೆ ನೀಡಿದ್ದಾರೆ.