<p><strong>ರಾಯ್ಪುರ:</strong> ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುವ ಭಾರತ ತಂಡವನ್ನು ಎದುರಿಸುವುದು ನಮಗೆ ಹೊಸದೇನು ಅಲ್ಲ. ಆದರೆ, ಅವರು ತಂಡದಲ್ಲಿ ಇರುವುದರಿಂದ ಟೀಂ ಇಂಡಿಯಾದ ಬಲ ಹೆಚ್ಚಾಗಲಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಹೇಳಿದ್ದಾರೆ. </p><p>ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯನ್ನು 0–2ರ ಅಂತರದಲ್ಲಿ ಭಾರತದ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ, ಏಕದಿನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಹಾಗೂ ರೋಹಿತ್ ಶರ್ಮಾ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು.</p><p>ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ, ‘ಆ ಇಬ್ಬರು ಆಟಗಾರರು ಭಾರತ ತಂಡಕ್ಕೆ ಮರಳಿರುವುದರಿಂದ ಅವರ ತಂಡಕ್ಕೆ ಬಲ ಬರಲಿದೆ. ಸರಣಿಯ ಆರಂಭದಲ್ಲೇ ನಾವು ಹೇಳಿದಂತೆ ಆ ಇಬ್ಬರೂ ಸಾಕಷ್ಟು ಅನುಭವ, ಕೌಶಲ ಹೊಂದಿದ್ದಾರೆ. ಹಾಗಾಗಿ ಈ ಇಬ್ಬರ ಉಪಸ್ಥಿತಿ ಆ ತಂಡಕ್ಕೆ ಪ್ರಯೋಜನಕಾರಿ’ ಎಂದರು.</p><p>ನಾವು ಭಾರತ ತಂಡವನ್ನು ಹಲವು ಬಾರಿ ಎದುರಿಸಿದ್ದೇವೆ. ಅದರಲ್ಲಿ ಸೋಲು–ಗೆಲುವು ಎರಡನ್ನೂ ನಾವು ನೋಡಿದ್ದೇವೆ. ಈ ಅಂಕಿ ಅಂಶಗಳು ಸರಣಿಯನ್ನು ಮತ್ತಷ್ಟು ರೋಮಾಂಚನಗೊಳಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ:</strong> ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುವ ಭಾರತ ತಂಡವನ್ನು ಎದುರಿಸುವುದು ನಮಗೆ ಹೊಸದೇನು ಅಲ್ಲ. ಆದರೆ, ಅವರು ತಂಡದಲ್ಲಿ ಇರುವುದರಿಂದ ಟೀಂ ಇಂಡಿಯಾದ ಬಲ ಹೆಚ್ಚಾಗಲಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಹೇಳಿದ್ದಾರೆ. </p><p>ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯನ್ನು 0–2ರ ಅಂತರದಲ್ಲಿ ಭಾರತದ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ, ಏಕದಿನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಹಾಗೂ ರೋಹಿತ್ ಶರ್ಮಾ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು.</p><p>ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ, ‘ಆ ಇಬ್ಬರು ಆಟಗಾರರು ಭಾರತ ತಂಡಕ್ಕೆ ಮರಳಿರುವುದರಿಂದ ಅವರ ತಂಡಕ್ಕೆ ಬಲ ಬರಲಿದೆ. ಸರಣಿಯ ಆರಂಭದಲ್ಲೇ ನಾವು ಹೇಳಿದಂತೆ ಆ ಇಬ್ಬರೂ ಸಾಕಷ್ಟು ಅನುಭವ, ಕೌಶಲ ಹೊಂದಿದ್ದಾರೆ. ಹಾಗಾಗಿ ಈ ಇಬ್ಬರ ಉಪಸ್ಥಿತಿ ಆ ತಂಡಕ್ಕೆ ಪ್ರಯೋಜನಕಾರಿ’ ಎಂದರು.</p><p>ನಾವು ಭಾರತ ತಂಡವನ್ನು ಹಲವು ಬಾರಿ ಎದುರಿಸಿದ್ದೇವೆ. ಅದರಲ್ಲಿ ಸೋಲು–ಗೆಲುವು ಎರಡನ್ನೂ ನಾವು ನೋಡಿದ್ದೇವೆ. ಈ ಅಂಕಿ ಅಂಶಗಳು ಸರಣಿಯನ್ನು ಮತ್ತಷ್ಟು ರೋಮಾಂಚನಗೊಳಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>