<p><strong>ನವದೆಹಲಿ:</strong> 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್ಗೆ ಮರಳಿದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. 15 ಎಸೆತಗಳನ್ನಷ್ಟೇ ಎದುರಿಸಿದರು. ಇದು ಅರುಣ್ ಜೇಟ್ಲಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ತರಿಸಿತು. ಅಲ್ಲದೆ ಅವರ ಫಾರ್ಮ್ ಬಗ್ಗೆ ಎದ್ದಿರುವ ಚರ್ಚೆಯ ಬೆಂಕಿಗೆ ತುಪ್ಪವೂ ಸುರಿದಿದೆ. </p>.ರಾಜಧಾನಿಯಲ್ಲಿ ವಿರಾಟ್ ಮೇನಿಯಾ: ಕೊಹ್ಲಿ ನೋಡಲು ಕಿ.ಮೀ ಗಟ್ಟಲೆ ಜನ.<p>ರೈಲ್ವೆಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ವಿರಾಟ್ ಕೊಹ್ಲಿಗೆ ನೆರೆದಿದ್ದ ಪ್ರೇಕ್ಷಕರಿಂದ ಅಭೂತಪೂರ್ವ ಸ್ವಾಗತ ಲಭಿಸಿತು. ಪ್ರೇಕ್ಷಕರಿಂದ ‘ಆರ್ಸಿಬಿ… ಆರ್ಸಿಬಿ.. ಕೊಹ್ಲಿ…ಕೊಹ್ಲಿ’ ಎನ್ನುವ ಉದ್ಛೋಷ ಮೊಳಗಿಸಿದರು. </p><p>ರೈಲ್ವೆಸ್ನ ಪೇಸರ್ ಹಿಮಾಂಶು ಸಂಗ್ವಾನ್ ಎಸೆದ 28ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ವಿರಾಟ್, ಉತ್ತಮ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದರು. ಆದರೆ ಮುಂದಿನ ಎಸೆತದಲ್ಲೇ ಅವರ ವಿಕೆಟ್ಗಳು ಕಿತ್ತು ಬಂದವು. ನಿರಾಸೆಯಿಂದ ವಿರಾಟ್ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.</p>.Ranji Trophy: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ನಮಿಸಿದ ಅಭಿಮಾನಿ.<p>ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಕಂಡಿದ್ದ ವಿರಾಟ್ ಅವರ ವೃತ್ತಿ ಜೀವನದ ಬಗ್ಗೆಯೇ ಪ್ರಶ್ನೆಗಳು ಎದ್ದಿದ್ದವು. ವಿರಾಟ್ರಂತೆ ಹಲವು ಆಟಗಾರರು ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ದೇಶಿ ಪಂದ್ಯಗಳನ್ನು ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತ್ತು.</p><p>ಹೀಗಾಗಿ ವಿರಾಟ್ ದೆಹಲಿ ಪರ ರಣಜಿಗೆ ಆಡಿದ್ದರು. ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಸಂಜಯ್ ಬಾಂಗಾರ್ ಅವರಿಂದ ತರಬೇತಿ ಪಡೆದಿದ್ದರು.</p> .ದೆಹಲಿ ತಂಡದ ನಾಯಕತ್ವ ಬೇಡವೆಂದ ವಿರಾಟ್ ಕೊಹ್ಲಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್ಗೆ ಮರಳಿದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. 15 ಎಸೆತಗಳನ್ನಷ್ಟೇ ಎದುರಿಸಿದರು. ಇದು ಅರುಣ್ ಜೇಟ್ಲಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ತರಿಸಿತು. ಅಲ್ಲದೆ ಅವರ ಫಾರ್ಮ್ ಬಗ್ಗೆ ಎದ್ದಿರುವ ಚರ್ಚೆಯ ಬೆಂಕಿಗೆ ತುಪ್ಪವೂ ಸುರಿದಿದೆ. </p>.ರಾಜಧಾನಿಯಲ್ಲಿ ವಿರಾಟ್ ಮೇನಿಯಾ: ಕೊಹ್ಲಿ ನೋಡಲು ಕಿ.ಮೀ ಗಟ್ಟಲೆ ಜನ.<p>ರೈಲ್ವೆಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ವಿರಾಟ್ ಕೊಹ್ಲಿಗೆ ನೆರೆದಿದ್ದ ಪ್ರೇಕ್ಷಕರಿಂದ ಅಭೂತಪೂರ್ವ ಸ್ವಾಗತ ಲಭಿಸಿತು. ಪ್ರೇಕ್ಷಕರಿಂದ ‘ಆರ್ಸಿಬಿ… ಆರ್ಸಿಬಿ.. ಕೊಹ್ಲಿ…ಕೊಹ್ಲಿ’ ಎನ್ನುವ ಉದ್ಛೋಷ ಮೊಳಗಿಸಿದರು. </p><p>ರೈಲ್ವೆಸ್ನ ಪೇಸರ್ ಹಿಮಾಂಶು ಸಂಗ್ವಾನ್ ಎಸೆದ 28ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ವಿರಾಟ್, ಉತ್ತಮ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದರು. ಆದರೆ ಮುಂದಿನ ಎಸೆತದಲ್ಲೇ ಅವರ ವಿಕೆಟ್ಗಳು ಕಿತ್ತು ಬಂದವು. ನಿರಾಸೆಯಿಂದ ವಿರಾಟ್ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.</p>.Ranji Trophy: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ನಮಿಸಿದ ಅಭಿಮಾನಿ.<p>ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಕಂಡಿದ್ದ ವಿರಾಟ್ ಅವರ ವೃತ್ತಿ ಜೀವನದ ಬಗ್ಗೆಯೇ ಪ್ರಶ್ನೆಗಳು ಎದ್ದಿದ್ದವು. ವಿರಾಟ್ರಂತೆ ಹಲವು ಆಟಗಾರರು ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ದೇಶಿ ಪಂದ್ಯಗಳನ್ನು ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತ್ತು.</p><p>ಹೀಗಾಗಿ ವಿರಾಟ್ ದೆಹಲಿ ಪರ ರಣಜಿಗೆ ಆಡಿದ್ದರು. ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಸಂಜಯ್ ಬಾಂಗಾರ್ ಅವರಿಂದ ತರಬೇತಿ ಪಡೆದಿದ್ದರು.</p> .ದೆಹಲಿ ತಂಡದ ನಾಯಕತ್ವ ಬೇಡವೆಂದ ವಿರಾಟ್ ಕೊಹ್ಲಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>