ಆರಂಭಿಕ ಬ್ಯಾಟರ್ ಅಭಿಜಿತ್ ತೋಮರ್ ಅವರನ್ನು ಪ್ರಸಿದ್ಧ ಕೃಷ್ಣ ಅವರು ವಾಪಸ್ ಕಳುಹಿಸಿದರೆ ಮಣಿಂದರ್ ಸಿಂಗ್ ಮತ್ತು ಮಹಿಪಾಲ್ ಲೊಮ್ರೊರ್ ವಿಕೆಟ್ ವೈಶಾಖ್ ಪಾಲಾಯಿತು. ಆಗ ತಂಡ 15ಕ್ಕೆ3 ಎಂಬ ಸ್ಥಿತಿಯಲ್ಲಿತ್ತು. 19 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ತಂತ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ದೀಪಕ್ ಹೂಡಾ ಮತ್ತು ಸಮರ್ಪಿತ್ ಜೋಶಿ ಶತಕದ (118 ರನ್) ಜೊತೆಯಾಟವಾಡಿ ತಂಡವನ್ನು ಕಾಪಾಡಿದರು.