<p><strong>ಠಾಣಾ:</strong> ಮೂತ್ರನಾಳದ ಸೋಂಕಿಗಾಗಿ ಭಿವಂಡಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕ್ರಿಕೆಟ್ ತಾರೆ ವಿನೋದ್ ಕಾಂಬ್ಳಿ ಅವರಿಗೆ ಮಂಗಳವಾರ ಜ್ವರ ಕಾಣಿಸಿಕೊಂಡಿದೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರ ತಂಡ ತಿಳಿಸಿದೆ.</p>.<p>ಶನಿವಾರ 52 ವರ್ಷ ವಯಸ್ಸಿನ ಆಟಗಾರನನ್ನು ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.</p>.<p>ಈ ಹಿಂದೆ ನಡೆಸಲಾದ ಸರಣಿ ಪರೀಕ್ಷೆಗಳಲ್ಲಿ ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರಿಗೆ ಎಂಆರ್ಐ ಸ್ಕ್ಯಾನಿಂಗ್ ನಡೆಸಲು ಡಾ.ವಿವೇಕ್ ತ್ರಿವೇದಿ ನೇತೃತ್ವದ ವೈದ್ಯರ ತಂಡ ಯೋಚಿಸಿತ್ತು. ಆದರೆ ಜ್ವರ ಕಾಣಿಸಿಕೊಂಡ ಕಾರಣ ಎಂಆರ್ಐ ನಂತರ ನಡೆಸಲು ನಿರ್ಧರಿಸಲಾಗಿದೆ.</p>.<p>ಅವರನ್ನು ಒಂದೆರಡು ದಿನಗಳಲ್ಲಿ ಐಸಿಯುನಿಂದ ಸ್ಥಳಾಂತರಿಸಿ, ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಎಂದು ಡಾ.ತ್ರಿವೇದಿ ತಿಳಿಸಿದ್ದಾರೆ</p>.<p>ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ರಕ್ತದೊತ್ತಡದಲ್ಲೂ ಏರಿಳಿತ ಆಗುತಿತ್ತು. ಮುಂದಿನ 24 ಗಂಟೆ ಅವರ ದೇಹಸ್ಥಿತಿ ಮೇಲೆ ಇಡಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಠಾಣಾ:</strong> ಮೂತ್ರನಾಳದ ಸೋಂಕಿಗಾಗಿ ಭಿವಂಡಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕ್ರಿಕೆಟ್ ತಾರೆ ವಿನೋದ್ ಕಾಂಬ್ಳಿ ಅವರಿಗೆ ಮಂಗಳವಾರ ಜ್ವರ ಕಾಣಿಸಿಕೊಂಡಿದೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರ ತಂಡ ತಿಳಿಸಿದೆ.</p>.<p>ಶನಿವಾರ 52 ವರ್ಷ ವಯಸ್ಸಿನ ಆಟಗಾರನನ್ನು ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.</p>.<p>ಈ ಹಿಂದೆ ನಡೆಸಲಾದ ಸರಣಿ ಪರೀಕ್ಷೆಗಳಲ್ಲಿ ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರಿಗೆ ಎಂಆರ್ಐ ಸ್ಕ್ಯಾನಿಂಗ್ ನಡೆಸಲು ಡಾ.ವಿವೇಕ್ ತ್ರಿವೇದಿ ನೇತೃತ್ವದ ವೈದ್ಯರ ತಂಡ ಯೋಚಿಸಿತ್ತು. ಆದರೆ ಜ್ವರ ಕಾಣಿಸಿಕೊಂಡ ಕಾರಣ ಎಂಆರ್ಐ ನಂತರ ನಡೆಸಲು ನಿರ್ಧರಿಸಲಾಗಿದೆ.</p>.<p>ಅವರನ್ನು ಒಂದೆರಡು ದಿನಗಳಲ್ಲಿ ಐಸಿಯುನಿಂದ ಸ್ಥಳಾಂತರಿಸಿ, ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಎಂದು ಡಾ.ತ್ರಿವೇದಿ ತಿಳಿಸಿದ್ದಾರೆ</p>.<p>ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ರಕ್ತದೊತ್ತಡದಲ್ಲೂ ಏರಿಳಿತ ಆಗುತಿತ್ತು. ಮುಂದಿನ 24 ಗಂಟೆ ಅವರ ದೇಹಸ್ಥಿತಿ ಮೇಲೆ ಇಡಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>