ಈ ವೇಳೆ ಮಾತನಾಡಿದ ಬೆಂಗಳೂರಿನ ಪಡಿಕ್ಕಲ್, ‘ಶತಕ ಗಳಿಸುವುದಕ್ಕಿಂತಲೂ ತಂಡವನ್ನು ಬೇಗನೆ ಗೆಲುವಿನ ದಡ ಸೇರಿಸುವುದು ಮುಖ್ಯ. ನಮ್ಮಿಬ್ಬರ ಸಂಭಾಷಣೆಯಲ್ಲಿ ಅದನ್ನು ಸ್ಪಷ್ಟವಾಗಿ ಕೊಹ್ಲಿಗೆ ಹೇಳಿದ್ದೆ. ಆದರೆ, ಅವರ ಪ್ರೋತ್ಸಾಹದಿಂದ ಎರಡೂ ಸಾಧ್ಯವಾಯಿತು‘ 'ಟೂರ್ನಿಗಿಂತ ಮುನ್ನ ನಾನು ಕೊರೊನಾ ಸೋಂಕಿಗೊಳಗಾಗಿದ್ದಾಗ ಇಲ್ಲಿಗೆ ಬಂದು ಆಟವಾಡುವ ಬಗ್ಗೆ ಯೋಚಿಸುತ್ತಿದ್ದೆ. ಮೊದಲ ಪಂದ್ಯಕ್ಕೆ ಅಲಭ್ಯರಾದಾಗ ತುಂಬಾ ಬೇಸರವಾಗಿತ್ತು. ಈಗ ತಂಡದ ಗೆಲುವಿಗಾಗಿ ಕೊಡುಗೆ ನೀಡಿರುವುದು ಸಂತಸ ನೀಡಿದೆ. ತೃಪ್ತಿದಾಯಕ ಇನಿಂಗ್ಸ್ ಇದು' ಎಂದಿದ್ದಾರೆ.