<p><strong>ಕ್ಯಾನ್ಬೆರಾ:</strong> ಈ ದಿನದ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಅವರನ್ನು ಆಡಿಸುವ ಯಾವುದೇ ಯೋಚನೆ ನಮಗಿರಲಿಲ್ಲ. ಆದರೆ ಕಂಕಷನ್ ನಿಯಮ ಪಾಲನೆ ಇದ್ದ ಕಾರಣ ಆಡಿಸಬೇಕಾಯಿತು. ಅದು ಫಲ ನೀಡಿತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಶುಕ್ರವಾರ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ಚಾಹಲ್ ಅವರನ್ನು ಹನ್ನೊಂದರ ಬಳಗದಲ್ಲಿ ಆಯ್ಕೆ ಮಾಡಿರಲಿಲ್ಲ. ಜಡೇಜ ಬ್ಯಾಟಿಂಗ್ ಚೆನ್ನಾಗಿತ್ತು. ಆದರೆ ಹೆಲ್ಮೆಟ್ಗೆ ಚೆಂಡು ಬಡಿದ ನಂತರ ತಮ್ಮ ತಲೆ ಸುತ್ತುವಂತೆ ಭಾಸವಾಗುತ್ತಿದೆಯೆಂದು ಅವರು ಹೇಳಿದ್ದರು. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಯಿತು‘ ಎಂದರು.</p>.<p>’ಕಂಕಷನ್ ಬದಲಾವಣೆಯು ಅಪರೂಪಕ್ಕೆ ನಡೆಯುವಂತಹದ್ದು. ಇವತ್ತು ನಮಗೆ ಅದು ಫಲಪ್ರದವಾಗಿದೆ. ಮುಂದೆ ಇಂತಹ ಸಂದರ್ಭ ಮತ್ತೆ ಎದುರಾದರೆ ನಮ್ಮ ಪರವಾಗಿ ಅದು ಫಲ ನೀಡಲಿಕ್ಕಿಲ್ಲ. ಅಲ್ಲದೇ ಸಮ–ಸಮ ಆಟಗಾರನ ಲಭ್ಯತೆಯೂ ಸಿಗಲಿಕ್ಕಿಲ್ಲ‘ ಎಂದು ಕೊಹ್ಲಿ ಹೇಳಿದರು.</p>.<p>’ಚಾಹಲ್ ಕಣಕ್ಕಿಳಿದು ಅಮೋಘವಾಗಿ ಬೌಲಿಂಗ್ ಮಾಡಿದರು. ಪಿಚ್ನ ಗುಣವನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಎದುರಾಳಿಗಳನ್ನು ಮಣಿಸುವ ತಮ್ಮ ಸ್ವಭಾವವನ್ನು ಚಾಹಲ್ ತೋರಿಸಿದರು. ಆಸ್ಟ್ರೇಲಿಯಾ ಬ್ಯಾಟಿಂಗ್ ನ ಆರಂಭ ಚೆನ್ನಾಗಿಯೇ ಇತ್ತು. ಆದರೆ ನಮ್ಮ ಬೌಲರ್ಗಳ ಶ್ರಮಕ್ಕೆ ಫಲ ಸಿಕ್ಕಿತು‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ಯಾನ್ಬೆರಾ:</strong> ಈ ದಿನದ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಅವರನ್ನು ಆಡಿಸುವ ಯಾವುದೇ ಯೋಚನೆ ನಮಗಿರಲಿಲ್ಲ. ಆದರೆ ಕಂಕಷನ್ ನಿಯಮ ಪಾಲನೆ ಇದ್ದ ಕಾರಣ ಆಡಿಸಬೇಕಾಯಿತು. ಅದು ಫಲ ನೀಡಿತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಶುಕ್ರವಾರ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ಚಾಹಲ್ ಅವರನ್ನು ಹನ್ನೊಂದರ ಬಳಗದಲ್ಲಿ ಆಯ್ಕೆ ಮಾಡಿರಲಿಲ್ಲ. ಜಡೇಜ ಬ್ಯಾಟಿಂಗ್ ಚೆನ್ನಾಗಿತ್ತು. ಆದರೆ ಹೆಲ್ಮೆಟ್ಗೆ ಚೆಂಡು ಬಡಿದ ನಂತರ ತಮ್ಮ ತಲೆ ಸುತ್ತುವಂತೆ ಭಾಸವಾಗುತ್ತಿದೆಯೆಂದು ಅವರು ಹೇಳಿದ್ದರು. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಯಿತು‘ ಎಂದರು.</p>.<p>’ಕಂಕಷನ್ ಬದಲಾವಣೆಯು ಅಪರೂಪಕ್ಕೆ ನಡೆಯುವಂತಹದ್ದು. ಇವತ್ತು ನಮಗೆ ಅದು ಫಲಪ್ರದವಾಗಿದೆ. ಮುಂದೆ ಇಂತಹ ಸಂದರ್ಭ ಮತ್ತೆ ಎದುರಾದರೆ ನಮ್ಮ ಪರವಾಗಿ ಅದು ಫಲ ನೀಡಲಿಕ್ಕಿಲ್ಲ. ಅಲ್ಲದೇ ಸಮ–ಸಮ ಆಟಗಾರನ ಲಭ್ಯತೆಯೂ ಸಿಗಲಿಕ್ಕಿಲ್ಲ‘ ಎಂದು ಕೊಹ್ಲಿ ಹೇಳಿದರು.</p>.<p>’ಚಾಹಲ್ ಕಣಕ್ಕಿಳಿದು ಅಮೋಘವಾಗಿ ಬೌಲಿಂಗ್ ಮಾಡಿದರು. ಪಿಚ್ನ ಗುಣವನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಎದುರಾಳಿಗಳನ್ನು ಮಣಿಸುವ ತಮ್ಮ ಸ್ವಭಾವವನ್ನು ಚಾಹಲ್ ತೋರಿಸಿದರು. ಆಸ್ಟ್ರೇಲಿಯಾ ಬ್ಯಾಟಿಂಗ್ ನ ಆರಂಭ ಚೆನ್ನಾಗಿಯೇ ಇತ್ತು. ಆದರೆ ನಮ್ಮ ಬೌಲರ್ಗಳ ಶ್ರಮಕ್ಕೆ ಫಲ ಸಿಕ್ಕಿತು‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>