<p><strong>ಮುಂಬೈ:</strong> ದೇಶಿ ಕ್ರಿಕೆಟ್ನಲ್ಲಿ ಮುಂಬೈ ಕ್ರಿಕೆಟ್ ತಂಡದಲ್ಲೇ ತಮ್ಮನ್ನು ಮುಂದುವರಿಸುವಂತೆ ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಯನ್ನು (ಎಂಸಿಎ) ಕೋರಿದ್ದಾರೆ.</p>.<p>ತಿಂಗಳ ಹಿಂದೆ ಗೋವಾ ತಂಡದ ಪರ ಆಡಲು ತಮಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ಅವರು ಎಂಸಿಎಯನ್ನು ಕೋರಿ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು.</p>.<p>ಮುಂದಿನ ದೇಶಿ ಕ್ರಿಕೆಟ್ ಋತುವಿನಲ್ಲಿ ತಾವು ಮುಂಬೈ ತಂಡವನ್ನು ಪ್ರತಿನಿಧಿಸಲು ಲಭ್ಯರಿರುವುದಾಗಿ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಗೆ ಇ–ಮೇಲ್ ಮೂಲಕ ಕೋರಿಕೆ ಕಳುಹಿಸಿದ್ದಾರೆ.</p>.<p>‘ಕುಟುಂಬವನ್ನು ಗೋವಾಕ್ಕೆ ಸ್ಥಳಾಂತರ ಮಾಡುವ ಯೋಜನೆಯನ್ನು ಈ ಮೊದಲು ಹಾಕಿಕೊಂಡಿದ್ದೆ. ಈಗ ಅದು ರದ್ದಾಗಿದೆ. ಹೀಗಾಗಿ ಈ ಹಿಂದೆ ನಿರಾಕ್ಷೇಪಣಾ ಪತ್ರವನ್ನು ವಾಪಸು ಪಡೆಯಲು ಸಲ್ಲಿಸಿರುವ ವಿನಂತಿಯನ್ನು ಪರಿಗಣಿಸಬೇಕು’ ಎಂದು ಅವರು ಇ–ಮೇಲ್ನಲ್ಲಿ ಮನವಿ ಮಾಡಿದ್ದಾರೆ.</p>.<p>ಉತ್ತರ ಪ್ರದೇಶದ ಭದೋಹಿಯವರಾದ ಜೈಸ್ವಾಲ್ ಎಳೆ ವಯಸ್ಸಿನಲ್ಲಿ ಮುಂಬೈಗೆ ಬಂದು ಕ್ರಿಕೆಟ್ನಲ್ಲಿ ಹಂತ ಹಂತವಾಗಿ ಏಳಿಗೆ ಕಂಡಿದ್ದರು. ಅವರು ಭಾರತ ತಂಡವನ್ನು ಮೂರೂ ಮಾದರಿಯಲ್ಲಿ ಪ್ರತಿನಿಧಿಸಿದ್ದಾರೆ. ಗೋವಾ ತಂಡಕ್ಕೆ ನಾಯಕನಾಗುವ ಸಾಧ್ಯತೆಯ ಕಾರಣ ಅಲ್ಲಿಗೆ ಸ್ಥಳಾಂತರಗೊಳ್ಳುವ ಅಪೇಕ್ಷೆ ಹೊಂದಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ದೇಶಿ ಕ್ರಿಕೆಟ್ನಲ್ಲಿ ಮುಂಬೈ ಕ್ರಿಕೆಟ್ ತಂಡದಲ್ಲೇ ತಮ್ಮನ್ನು ಮುಂದುವರಿಸುವಂತೆ ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಯನ್ನು (ಎಂಸಿಎ) ಕೋರಿದ್ದಾರೆ.</p>.<p>ತಿಂಗಳ ಹಿಂದೆ ಗೋವಾ ತಂಡದ ಪರ ಆಡಲು ತಮಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ಅವರು ಎಂಸಿಎಯನ್ನು ಕೋರಿ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು.</p>.<p>ಮುಂದಿನ ದೇಶಿ ಕ್ರಿಕೆಟ್ ಋತುವಿನಲ್ಲಿ ತಾವು ಮುಂಬೈ ತಂಡವನ್ನು ಪ್ರತಿನಿಧಿಸಲು ಲಭ್ಯರಿರುವುದಾಗಿ ಜೈಸ್ವಾಲ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಗೆ ಇ–ಮೇಲ್ ಮೂಲಕ ಕೋರಿಕೆ ಕಳುಹಿಸಿದ್ದಾರೆ.</p>.<p>‘ಕುಟುಂಬವನ್ನು ಗೋವಾಕ್ಕೆ ಸ್ಥಳಾಂತರ ಮಾಡುವ ಯೋಜನೆಯನ್ನು ಈ ಮೊದಲು ಹಾಕಿಕೊಂಡಿದ್ದೆ. ಈಗ ಅದು ರದ್ದಾಗಿದೆ. ಹೀಗಾಗಿ ಈ ಹಿಂದೆ ನಿರಾಕ್ಷೇಪಣಾ ಪತ್ರವನ್ನು ವಾಪಸು ಪಡೆಯಲು ಸಲ್ಲಿಸಿರುವ ವಿನಂತಿಯನ್ನು ಪರಿಗಣಿಸಬೇಕು’ ಎಂದು ಅವರು ಇ–ಮೇಲ್ನಲ್ಲಿ ಮನವಿ ಮಾಡಿದ್ದಾರೆ.</p>.<p>ಉತ್ತರ ಪ್ರದೇಶದ ಭದೋಹಿಯವರಾದ ಜೈಸ್ವಾಲ್ ಎಳೆ ವಯಸ್ಸಿನಲ್ಲಿ ಮುಂಬೈಗೆ ಬಂದು ಕ್ರಿಕೆಟ್ನಲ್ಲಿ ಹಂತ ಹಂತವಾಗಿ ಏಳಿಗೆ ಕಂಡಿದ್ದರು. ಅವರು ಭಾರತ ತಂಡವನ್ನು ಮೂರೂ ಮಾದರಿಯಲ್ಲಿ ಪ್ರತಿನಿಧಿಸಿದ್ದಾರೆ. ಗೋವಾ ತಂಡಕ್ಕೆ ನಾಯಕನಾಗುವ ಸಾಧ್ಯತೆಯ ಕಾರಣ ಅಲ್ಲಿಗೆ ಸ್ಥಳಾಂತರಗೊಳ್ಳುವ ಅಪೇಕ್ಷೆ ಹೊಂದಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>