<p><strong>ನವದೆಹಲಿ:</strong> ಸದ್ಯದ ಪರಿಸ್ಥಿತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮೂರು ಪಂದ್ಯಗಳಿಂದ ಕೂಡಿದ್ದರೆ ಅನುಕೂಲ ಆಗುತ್ತಿತ್ತು ಎಂದು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಒಂದೇ ಫೈನಲ್ನಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.</p>.<p>‘ನ್ಯೂಜಿಲೆಂಡ್ ಈಗಾಗಲೇ ಪಂದ್ಯಗಳಲ್ಲಿ ತೊಡಗಿಸಿಕೊಂಡಿದೆ. ಭಾರತಕ್ಕೆ ಫೈನಲ್ಗೂ ಮೊದಲು ಅಭ್ಯಾಸಕ್ಕೆ ಹೆಚ್ಚು ಅವಕಾಶವಿಲ್ಲ. ಫೈನಲ್ ಮೂರು ಪಂದ್ಯಗಳಿಂದ ಕೂಡಿದ್ದರೆ ಮೊದಲ ಪಂದ್ಯದಲ್ಲಿ ಸೋತರೂ ಚೇತರಿಸಿಕೊಳ್ಳಲು ಮತ್ತೆ ಎರಡು ಅವಕಾಶಗಳಿರುತ್ತಿತ್ತು‘ ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.</p>.<p>‘ಭಾರತ ಬಲಿಷ್ಠ ತಂಡ. ಈಚೆಗೆ ವಿದೇಶಗಳಲ್ಲಿ ನಡೆದ ಸರಣಿಗಳಲ್ಲಿ ವಿರಾಟ್ ಬಳಗ ಅತ್ಯುತ್ತಮ ಸಾಮರ್ಥ್ಯ ತೋರಿದೆ. ಆದರೆ ಈಗ ಬ್ಯಾಟಿಂಗ್ನಷ್ಟು ಬೌಲಿಂಗ್ ಬಲಿಷ್ಠವಾಗಿಲ್ಲ’ ಎಂದ ಯುವರಾಜ್ ‘ನೆಟ್ಸ್ನಲ್ಲಿ ಅಭ್ಯಾಸಕ್ಕೆ ಅವಕಾಶವಿದೆಯಾದರೂ ಅಭ್ಯಾಸ ಪಂದ್ಯಗಳಿಂದ ಆಗುವ ಪರಿಣಾಮವೇ ಬೇರೆ’ ಎಂದರು.</p>.<p>‘ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯದ ಪ್ರತಿಯೊಂದು ಅವಧಿಯೂ ಭಿನ್ನವಾಗಿರುತ್ತದೆ. ಬೆಳಿಗ್ಗಿನ ಅವಧಿಯಲ್ಲಿ ಚೆಂಡು ಸ್ವಿಂಗ್ ಆಗುತ್ತದೆ. ವೇಗವೂ ಹೆಚ್ಚು ಇರುತ್ತದೆ. ಭೋಜನಾನಂತರದ ಅವಧಿಯಲ್ಲಿ ರನ್ಗಳು ಹರಿದುಬರುತ್ತವೆ. ಚಹಾ ವಿರಾಮದ ನಂತರ ಮತ್ತೆ ಚೆಂಡು ಸ್ವಿಂಗ್ ಆಗುತ್ತದೆ. ಈ ಎಲ್ಲ ಸಂದರ್ಭಗಳಿಗೂ ಹೊಂದಿಕೊಳ್ಳಲು ಸಾಧ್ಯವಾದರೆ ಯಶಸ್ಸು ಸಿಗಬಲ್ಲುದು’ ಎಂದು ಅವರು ಅಭಿಪ್ರಾಯಪಟ್ಟರು.</p>.<p><strong>ಇದನ್ನೂ ಓದಿ... <a href="https://www.prajavani.net/sports/cricket/lack-of-match-practice-may-hurt-even-world-class-players-836528.html" target="_blank">ಭಾರತ ತಂಡಕ್ಕೆ ಅಭ್ಯಾಸದ ಕೊರತೆ ಕಾಡಲಿದೆ: ದಿಲೀಪ್ ವೆಂಗ್ಸರ್ಕಾರ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸದ್ಯದ ಪರಿಸ್ಥಿತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮೂರು ಪಂದ್ಯಗಳಿಂದ ಕೂಡಿದ್ದರೆ ಅನುಕೂಲ ಆಗುತ್ತಿತ್ತು ಎಂದು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಒಂದೇ ಫೈನಲ್ನಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.</p>.<p>‘ನ್ಯೂಜಿಲೆಂಡ್ ಈಗಾಗಲೇ ಪಂದ್ಯಗಳಲ್ಲಿ ತೊಡಗಿಸಿಕೊಂಡಿದೆ. ಭಾರತಕ್ಕೆ ಫೈನಲ್ಗೂ ಮೊದಲು ಅಭ್ಯಾಸಕ್ಕೆ ಹೆಚ್ಚು ಅವಕಾಶವಿಲ್ಲ. ಫೈನಲ್ ಮೂರು ಪಂದ್ಯಗಳಿಂದ ಕೂಡಿದ್ದರೆ ಮೊದಲ ಪಂದ್ಯದಲ್ಲಿ ಸೋತರೂ ಚೇತರಿಸಿಕೊಳ್ಳಲು ಮತ್ತೆ ಎರಡು ಅವಕಾಶಗಳಿರುತ್ತಿತ್ತು‘ ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.</p>.<p>‘ಭಾರತ ಬಲಿಷ್ಠ ತಂಡ. ಈಚೆಗೆ ವಿದೇಶಗಳಲ್ಲಿ ನಡೆದ ಸರಣಿಗಳಲ್ಲಿ ವಿರಾಟ್ ಬಳಗ ಅತ್ಯುತ್ತಮ ಸಾಮರ್ಥ್ಯ ತೋರಿದೆ. ಆದರೆ ಈಗ ಬ್ಯಾಟಿಂಗ್ನಷ್ಟು ಬೌಲಿಂಗ್ ಬಲಿಷ್ಠವಾಗಿಲ್ಲ’ ಎಂದ ಯುವರಾಜ್ ‘ನೆಟ್ಸ್ನಲ್ಲಿ ಅಭ್ಯಾಸಕ್ಕೆ ಅವಕಾಶವಿದೆಯಾದರೂ ಅಭ್ಯಾಸ ಪಂದ್ಯಗಳಿಂದ ಆಗುವ ಪರಿಣಾಮವೇ ಬೇರೆ’ ಎಂದರು.</p>.<p>‘ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯದ ಪ್ರತಿಯೊಂದು ಅವಧಿಯೂ ಭಿನ್ನವಾಗಿರುತ್ತದೆ. ಬೆಳಿಗ್ಗಿನ ಅವಧಿಯಲ್ಲಿ ಚೆಂಡು ಸ್ವಿಂಗ್ ಆಗುತ್ತದೆ. ವೇಗವೂ ಹೆಚ್ಚು ಇರುತ್ತದೆ. ಭೋಜನಾನಂತರದ ಅವಧಿಯಲ್ಲಿ ರನ್ಗಳು ಹರಿದುಬರುತ್ತವೆ. ಚಹಾ ವಿರಾಮದ ನಂತರ ಮತ್ತೆ ಚೆಂಡು ಸ್ವಿಂಗ್ ಆಗುತ್ತದೆ. ಈ ಎಲ್ಲ ಸಂದರ್ಭಗಳಿಗೂ ಹೊಂದಿಕೊಳ್ಳಲು ಸಾಧ್ಯವಾದರೆ ಯಶಸ್ಸು ಸಿಗಬಲ್ಲುದು’ ಎಂದು ಅವರು ಅಭಿಪ್ರಾಯಪಟ್ಟರು.</p>.<p><strong>ಇದನ್ನೂ ಓದಿ... <a href="https://www.prajavani.net/sports/cricket/lack-of-match-practice-may-hurt-even-world-class-players-836528.html" target="_blank">ಭಾರತ ತಂಡಕ್ಕೆ ಅಭ್ಯಾಸದ ಕೊರತೆ ಕಾಡಲಿದೆ: ದಿಲೀಪ್ ವೆಂಗ್ಸರ್ಕಾರ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>