ಕುಶಾಲ ಪೆರೆರಾ (29 ರನ್) ಮತ್ತು ತಿಸಾರ ಪೆರೆರಾ (27 ರನ್) ಅವರಿಬ್ಬರೇ ಎರಡಂಕಿ ಮೊತ್ತ ದಾಖಲಿಸಿದರು. ಉಳಿಎ ಎಲ್ಲ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರು. ಇದರಿಂದಾಗಿ ತಂಡವು 60 ರನ್ಗಳಿಗೆ ಆರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ, ಕರುಣಾರತ್ನೆ ಒಬ್ಬರೇ ಹೋರಾಟ ಮುಂದುವರಿಸಿದರು. ಒಂದು ಕಡೆ ವಿಕೆಟ್ ಗಳು ಉರುಳುತ್ತಿದ್ದರೆ ಇನ್ನೊಂದೆಡೆ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಸಾಧ್ಯವಾದಷ್ಟೂ ವೇಗದಲ್ಲಿ ರನ್ಗಳನ್ನು ಗಳಿಸುವ ಒತ್ತಡ ಅವರ ಮೇಲಿತ್ತು. ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಅವರು ಕೊನೆಗೂ ಸಫಲರಾದರು.