ಹುಬ್ಬಳ್ಳಿ: ಗುವಾಹಟಿಯಲ್ಲಿ ಆಯೋಜನೆಯಾಗಿರುವ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ರಾಜ್ಯ ಸೈಕ್ಲಿಂಗ್ ತಂಡವನ್ನು ಗುರುವಾರ ಕರ್ನಾಟಕ ಸೈಕ್ಲಿಂಗ್ ಸಂಸ್ಥೆ ಪ್ರಕಟಿಸಿದೆ.
ಈ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಮೊದಲ ಬಾರಿಗೆ ಸೇರ್ಪಡೆಯಾಗಿದ್ದು, ಜ. 12ರಿಂದ 16ರ ವರೆಗೆ ಸ್ಪರ್ಧೆಗಳು ಜರುಗಲಿವೆ.
ಮೊದಲ ಎರಡು ದಿನ ರೋಡ್ ಸೈಕ್ಲಿಂಗ್ ಮತ್ತು ನಂತರದ ಮೂರು ದಿನ ಟ್ರ್ಯಾಕ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಅಲ್ಕಾ ಪಡತಾರೆ, ವಿಠ್ಠಲ ಬುರ್ಜಿ, ಭೀಮಪ್ಪ ವಿಜಯನಗರ ಮತ್ತು ಬಸವರಾಜ ಗುಳೇದ ತಂಡದ ಸಿಬ್ಬಂದಿಯಾಗಿದ್ದಾರೆ.
ತಂಡ ಇಂತಿದೆ: ಪುರುಷರ ವಿಭಾಗ, 21 ವರ್ಷದೊಳಗಿನವರು: ವೆಂಕಪ್ಪ ಕೆಂಗಲಗುತ್ತಿ, ಜಿ.ಟಿ. ಗಗನರೆಡ್ಡಿ, ವಿಶ್ವನಾಥ ಗಡಾದ, ಸಚಿನ ರಂಜಣಗಿ, ಗಣೇಶ ಕುಡಿಗಾನೂರ, ರಾಜು ಭಾಟಿ.