‘ಎಐಎಫ್ಎಫ್ ಟಿವಿ ಜೊತೆ ಗುರುವಾರ ಮಾತನಾಡಿದ ರವಿಶಂಕರ್ ’ಪ್ರತಿ ತಂಡಕ್ಕೂ ಒಬ್ಬ ಕೋಚ್ ಇರುತ್ತಾರೆ. ರೆಫರಿಗಳದೂ ಒಂದು ತಂಡವೇ. ಆದ್ದರಿಂದ ಈ ತಂಡಕ್ಕೂ ತರಬೇತುದಾರ ಇರುವುದು ಒಳ್ಳೆಯದು ಎಂದೆನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ರೆಫರಿ ಅಸೆಸರ್ (ಆರ್ಎ) ಪ್ರತಿ ಪಂದ್ಯದಲ್ಲೂ ರೆಫರಿಗಳ ಕಾರ್ಯವೈಖರಿಯನ್ನು ಗಮನಿಸುತ್ತಿರುತ್ತಾರೆ. ಈಗ, ಕೋಚ್ಗೂ ಮೌಲ್ಯಮಾಪನದ ಅವಕಾಶ ಸಿಗಲಿದೆ’ ಎಂದು ಅವರು ವಿವರಿಸಿದರು.