ಈ ಆದೇಶ ಹೊರಬಿದ್ದ ಒಂದು ದಿನದ ನಂತರ ಈಸ್ಟ್ ಬೆಂಗಾಲ್ನ ಹಿರಿಯ ಅಧಿಕಾರಿ ದೇಬಬ್ರತ ಸರ್ಕಾರ್ ಅವರು ಎಐಎಫ್ಎಫ್ ಶಿಸ್ತು ಸಮಿತಿಯ ಅಧ್ಯಕ್ಷ ಉಷಾನಾಥ್ ಬ್ಯಾನರ್ಜಿ ಅವರಿಗೆ ಮನವಿ ಸಲ್ಲಿಸಿ ತೀರ್ಪು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದರು. ಅದನ್ನು ನಿರಾಕರಿಸಿದ ಬ್ಯಾನರ್ಜಿ ‘ಸಮಿತಿಯ ಸದಸ್ಯರೆಲ್ಲರೂ ಅವಿರೋಧವಾಗಿ ನೀಡಿರುವ ತೀರ್ಪು ಇದು. ಮಾತ್ರವಲ್ಲ, ಫಾವ್ಲರ್ ತೀಕ್ಷ್ಣ ಮಾತುಗಳನ್ನು ಬಳಸಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮರುಪರಿಶೀಲನೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.