<p><strong>ಬೆಂಗಳೂರು</strong>: ಎ.ಎಸ್. ಸುಹಾಸ್ ಎಬೆನೇಜರ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ತಂಡವು ಮುಖ್ಯಮಂತ್ರಿ ಕಪ್ ಫುಟ್ಬಾಲ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. </p>.<p>ಉತ್ತಮ ಆಟವಾಡಿದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ತಂಡವು 5–1 ಗೋಲುಗಳ ಅಂತರದಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ತಂಡವನ್ನು ಮಣಿಸಿತು. </p>.<p>ಬಿಟಿಎಂ ತಂಡದ ಪರ ಎ.ಎಸ್ ಸುಹಾಸ್ ಎಬೆನೇಜರ್ (7, 10 ಮತ್ತು 32ನೇ ನಿಮಿಷ), ಎಂ.ಡಿ ರೆಹಾನ್ (38ನೇ ನಿ), ಕಾಬಾ ಬಿನ್ ಅಯ್ಯೂಬ್ (48ನೇ ನಿ) ಗೋಲು ದಾಖಲಿಸಿದರು. ದಾಸರಹಳ್ಳಿ ತಂಡದ ಪರ ಮಂಜುನಾಥ್ ರೆಡ್ಡಿ ಏಕೈಕ ಗೋಲು ದಾಖಲಿಸಿದರು. </p>.<p>‘ಸಿ’ ಗುಂಪಿನ ಪಂದ್ಯದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರ ತಂಡವು 2-1ರಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ತಂಡವನ್ನು ಮಣಿಸಿತು. </p>.<p>ರಾಜಾಜಿನಗರ ತಂಡದ ಪರ ರಾಜು ಡಿ. (25ನೇ ನಿ), ಮೊನೀಶ್ ಕುಮಾರ್ ಜಿ. (36 ನೇ ನಿ) ಗೋಲು ಗಳಿಸಿದರೆ, ಗಾಂಧಿನಗರ ತಂಡದ ಪರ ಮದನ್ (3ನೇ ನಿ) ಏಕೈಕ ಗೋಲು ತಂದಿತ್ತರು.</p>.<p><strong>ಇಂದಿನ ಪಂದ್ಯಗಳು:</strong></p>.<p>ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ - ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ (ಬೆಳಿಗ್ಗೆ 11.30ಕ್ಕೆ)<br>ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ -ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ (ಮಧ್ಯಾಹ್ನ 1.30ಕ್ಕೆ)<br>ವಿಜಯನಗರ ವಿಧಾನಸಭಾ ಕ್ಷೇತ್ರ - ಗೋವಿಂದರಾಜ ನಗರವಿಧಾನಸಭಾ ಕ್ಷೇತ್ರ (ಮಧ್ಯಾಹ್ನ 3ಕ್ಕೆ) </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎ.ಎಸ್. ಸುಹಾಸ್ ಎಬೆನೇಜರ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ತಂಡವು ಮುಖ್ಯಮಂತ್ರಿ ಕಪ್ ಫುಟ್ಬಾಲ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. </p>.<p>ಉತ್ತಮ ಆಟವಾಡಿದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ತಂಡವು 5–1 ಗೋಲುಗಳ ಅಂತರದಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ತಂಡವನ್ನು ಮಣಿಸಿತು. </p>.<p>ಬಿಟಿಎಂ ತಂಡದ ಪರ ಎ.ಎಸ್ ಸುಹಾಸ್ ಎಬೆನೇಜರ್ (7, 10 ಮತ್ತು 32ನೇ ನಿಮಿಷ), ಎಂ.ಡಿ ರೆಹಾನ್ (38ನೇ ನಿ), ಕಾಬಾ ಬಿನ್ ಅಯ್ಯೂಬ್ (48ನೇ ನಿ) ಗೋಲು ದಾಖಲಿಸಿದರು. ದಾಸರಹಳ್ಳಿ ತಂಡದ ಪರ ಮಂಜುನಾಥ್ ರೆಡ್ಡಿ ಏಕೈಕ ಗೋಲು ದಾಖಲಿಸಿದರು. </p>.<p>‘ಸಿ’ ಗುಂಪಿನ ಪಂದ್ಯದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರ ತಂಡವು 2-1ರಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ತಂಡವನ್ನು ಮಣಿಸಿತು. </p>.<p>ರಾಜಾಜಿನಗರ ತಂಡದ ಪರ ರಾಜು ಡಿ. (25ನೇ ನಿ), ಮೊನೀಶ್ ಕುಮಾರ್ ಜಿ. (36 ನೇ ನಿ) ಗೋಲು ಗಳಿಸಿದರೆ, ಗಾಂಧಿನಗರ ತಂಡದ ಪರ ಮದನ್ (3ನೇ ನಿ) ಏಕೈಕ ಗೋಲು ತಂದಿತ್ತರು.</p>.<p><strong>ಇಂದಿನ ಪಂದ್ಯಗಳು:</strong></p>.<p>ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ - ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ (ಬೆಳಿಗ್ಗೆ 11.30ಕ್ಕೆ)<br>ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ -ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ (ಮಧ್ಯಾಹ್ನ 1.30ಕ್ಕೆ)<br>ವಿಜಯನಗರ ವಿಧಾನಸಭಾ ಕ್ಷೇತ್ರ - ಗೋವಿಂದರಾಜ ನಗರವಿಧಾನಸಭಾ ಕ್ಷೇತ್ರ (ಮಧ್ಯಾಹ್ನ 3ಕ್ಕೆ) </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>