<p><strong>ನವದೆಹಲಿ:</strong> ತಜಕಿಸ್ತಾನ ಮತ್ತು ಕಿರ್ಗಿಸ್ತಾನ ವಿರುದ್ಧದ ಮುಂಬರುವ ಸೌಹಾರ್ದ ಫುಟ್ಬಾಲ್ ಪಂದ್ಯಗಳಿಗೆ 23 ಆಟಗಾರರನ್ನು ಒಳಗೊಂಡ ಭಾರತ 23 ವರ್ಷದೊಳಗಿನವರ ತಂಡವನ್ನು ಮುಖ್ಯ ಕೋಚ್ ನೌಶಾದ್ ಮೂಸಾ ಪ್ರಕಟಿಸಿದ್ದಾರೆ. ಕರ್ನಾಟಕದ ಮಿಡ್ಫೀಲ್ಡರ್ ವಿನೀತ್ ವೆಂಕಟೇಶ್ ಸ್ಥಾನ ಪಡೆದಿದ್ದಾರೆ.</p>.<p>ಜೂನ್ 1ರಿಂದ ಕೋಲ್ಕತ್ತದ ಎಐಎಫ್ಎಫ್ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿ ಪಡೆದಿರುವ ಆಟಗಾರರು ಸೋಮವಾರ ಸಂಜೆ ತಜಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆಯುವ ಎಎಫ್ಸಿ (23 ವರ್ಷದೊಳಗಿನವರ) 2026ರ ಏಷ್ಯನ್ ಕಪ್ ಅರ್ಹತಾ ಪಂದ್ಯಗಳಿಗೆ ಪೂರ್ವಸಿದ್ಧತೆಯ ಭಾಗವಾಗಿ ಸೌಹಾರ್ದ ಪಂದ್ಯ ನಡೆಯಲಿದೆ. </p>.<p>ಶಿಬಿರದಲ್ಲಿದ್ದ ಒಟ್ಟು 29 ಆಟಗಾರರ ಪೈಕಿ 20 ಮಂದಿ ಮತ್ತು ಸೀನಿಯರ್ ತಂಡದ ಮೂವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಹೇಲ್ ಅಹ್ಮದ್ ಭಟ್, ಆಯುಷ್ ಚೆಟ್ರಿ ಮತ್ತು ಅಭಿಷೇಕ್ ಸಿಂಗ್ ಅವರು ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರು.</p>.<p>ಭಾರತ ತಂಡವು ಜೂನ್ 18ರಂದು ತಜಕಿಸ್ತಾನ ವಿರುದ್ಧ ಮತ್ತು 21ರಂದು ಕಿರ್ಗಿಸ್ತಾನ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳು ತಜಕಿಸ್ತಾನನ ರಾಜಧಾನಿ ದುಶಾನ್ಬೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಹಿಸೋರ್ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ತಜಕಿಸ್ತಾನ ಮತ್ತು ಕಿರ್ಗಿಸ್ತಾನ ವಿರುದ್ಧದ ಮುಂಬರುವ ಸೌಹಾರ್ದ ಫುಟ್ಬಾಲ್ ಪಂದ್ಯಗಳಿಗೆ 23 ಆಟಗಾರರನ್ನು ಒಳಗೊಂಡ ಭಾರತ 23 ವರ್ಷದೊಳಗಿನವರ ತಂಡವನ್ನು ಮುಖ್ಯ ಕೋಚ್ ನೌಶಾದ್ ಮೂಸಾ ಪ್ರಕಟಿಸಿದ್ದಾರೆ. ಕರ್ನಾಟಕದ ಮಿಡ್ಫೀಲ್ಡರ್ ವಿನೀತ್ ವೆಂಕಟೇಶ್ ಸ್ಥಾನ ಪಡೆದಿದ್ದಾರೆ.</p>.<p>ಜೂನ್ 1ರಿಂದ ಕೋಲ್ಕತ್ತದ ಎಐಎಫ್ಎಫ್ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿ ಪಡೆದಿರುವ ಆಟಗಾರರು ಸೋಮವಾರ ಸಂಜೆ ತಜಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆಯುವ ಎಎಫ್ಸಿ (23 ವರ್ಷದೊಳಗಿನವರ) 2026ರ ಏಷ್ಯನ್ ಕಪ್ ಅರ್ಹತಾ ಪಂದ್ಯಗಳಿಗೆ ಪೂರ್ವಸಿದ್ಧತೆಯ ಭಾಗವಾಗಿ ಸೌಹಾರ್ದ ಪಂದ್ಯ ನಡೆಯಲಿದೆ. </p>.<p>ಶಿಬಿರದಲ್ಲಿದ್ದ ಒಟ್ಟು 29 ಆಟಗಾರರ ಪೈಕಿ 20 ಮಂದಿ ಮತ್ತು ಸೀನಿಯರ್ ತಂಡದ ಮೂವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಹೇಲ್ ಅಹ್ಮದ್ ಭಟ್, ಆಯುಷ್ ಚೆಟ್ರಿ ಮತ್ತು ಅಭಿಷೇಕ್ ಸಿಂಗ್ ಅವರು ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರು.</p>.<p>ಭಾರತ ತಂಡವು ಜೂನ್ 18ರಂದು ತಜಕಿಸ್ತಾನ ವಿರುದ್ಧ ಮತ್ತು 21ರಂದು ಕಿರ್ಗಿಸ್ತಾನ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳು ತಜಕಿಸ್ತಾನನ ರಾಜಧಾನಿ ದುಶಾನ್ಬೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಹಿಸೋರ್ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>