ಪಂದ್ಯದ ಮೂರನೇ ನಿಮಿಷ ದಿಂದಲೇ ಬಿಎಫ್ಸಿ ಆಟಗಾರರು ಚಾಕಚಕ್ಯತೆ ಮೆರೆದರು. ಒಡಿಶಾದ ನಾರಾಯಣದಾಸ್ ಮತ್ತು ನಂದ ಕುಮಾರ್ ಅವರ ದಾಳಿಯನ್ನು ಆಲ್ಬರ್ಟ್ ಸೆರಾನ್ ಮೋಹಕವಾಗಿ ತಡೆದು ಗಮನ ಸೆಳದರು. 7ನೇ ನಿಮಿಷದಲ್ಲಿ ರಾಫೆಲ್ ಆಗಸ್ಟೊ ಮತ್ತು ಉದಾಂತ ಸಿಂಗ್ ಎದುರಾಳಿಗಳ ಆವರಣದಲ್ಲಿ ಆಕ್ರಮಣ ನಡೆಸಿದರು. ಆದರೆ ಡೆವಾಂಡು ಡ್ಯಾನೆ ಚೆಂಡನ್ನು ಎದೆಯಲ್ಲಿ ತಡೆದು ತಂಡವನ್ನು ಆತಂಕದಿಂದ ಪಾರು ಮಾಡಿದರು. 9ನೇ ನಿಮಿಷದಲ್ಲಿ ನಿಶುಕುಮಾರ್ ಮತ್ತು ಹರ್ಮನ್ಜ್ಯೋತ್ ಖಾಬ್ರಾ ಹೊಂದಾಣಿಕೆಯ ಆಟಕ್ಕೆ ಗೋಲು ಒಲಿಯುವ ಸಾಧ್ಯತೆ ಒದಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಖಾಬ್ರಾ ಗುರಿ ತಪ್ಪಿದರು.