ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಫುಟ್‌ಬಾಲ್ ತಂಡ ಪ್ರಕಟ

Last Updated 27 ನವೆಂಬರ್ 2018, 19:05 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ), ಮುಂಬರುವ ಬಿ.ಸಿ.ರಾಯ್‌ ಟ್ರೋಫಿ ರಾಷ್ಟ್ರೀಯ ಜೂನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಮಂಗಳವಾರ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.

ನವೆಂಬರ್‌ 30ರಿಂದ ಡಿಸೆಂಬರ್ 9ರವರೆಗೆ ಒಡಿಶಾದ ಕಟಕ್‌ನಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದ್ದು, ರಾಜ್ಯ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಒಡಿಶಾ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ತಂಡಗಳೂ ಇದೇ ಗುಂಪಿನಲ್ಲಿವೆ.

ನವೆಂಬರ್‌ 30 ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಒಡಿಶಾ ವಿರುದ್ಧ ಸೆಣಸಲಿದೆ. ನಂತರ ಮುತ್ತಣ್ಣ ಪಡೆಗೆ ಮಧ್ಯ ಪ್ರದೇಶ (ಡಿಸೆಂಬರ್‌ 2) ಮತ್ತು ಉತ್ತರ ಪ್ರದೇಶ (ಡಿಸೆಂಬರ್‌ 4) ತಂಡಗಳ ಸವಾಲು ಎದುರಾಗಲಿದೆ.

ತಂಡ ಇಂತಿದೆ: ಬಿ.ಎಸ್‌.ಮೃಣಾಲ್‌ ಮುತ್ತಣ್ಣ (ನಾಯಕ), ಆರ್‌.ಆ್ಯಂಟೊ (ಉಪ ನಾಯಕ), ಎಸ್‌.ಶಂಕರ್‌ ಗಣೇಶ್‌, ವಿಕಾಸ್‌ ಶರ್ಮಾ, ನಿಕೇತ್‌, ಎನ್‌.ಯುಕೇಶ್‌, ಸಿ.ರೂಪೇಶ್‌, ಪಿ.ಎಸ್‌.ಜಸ್ಟಿನ್‌ ಅನಾಲ್‌, ಪಿ.ರಾಹುಲ್‌, ವೈ.ವಿ. ಪ್ರಫುಲ್‌ ಕುಮಾರ್‌, ರೋಷನ್‌ ಸಿಂಗ್‌, ಜೆ.ಕಿರಣ್‌ ರಾಜ್‌, ಡಿ.ಅರ್ನಾಲ್ಡ್‌ ಕಾರ್ಮೆಲ್‌ ರಾಜ್‌, ಆರ್ಯನ್‌ ಆಮ್ಲಾ, ಕೆ.ಕಾರ್ತಿಕ್‌, ಶ್ರೇಯಸ್‌ ಕೇಟ್ಕರ್‌, ಓಜಸ್‌ ಕಾಮತ್‌, ಗಾಡ್ವಿನ್‌ ಜಾನ್ಸನ್‌, ರಾಘವ ಎ.ಮಹೇಶ್ವರನ್‌ ಮತ್ತು ಆದಿತ್ಯ ಪಾಂಡೆ.

ಕೋಚ್‌: ಲೂಯಿಸ್‌ ನಿಕ್ಸನ್‌

ಮ್ಯಾನೇಜರ್‌: ದೀನಬಂಧು ರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT