ಬೆಂಗಳೂರು: ಕರ್ನಾಟಕದ ಕೆ.ಜೆ. ಆಕಾಶ್ ಅವರು ವಡೋದರದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕಂಚು ಗೆದ್ದಿದ್ದಾರೆ.
ಸೆಮಿಫೈನಲ್ನಲ್ಲಿ ಆಕಾಶ್ 5-11, 5-11, 11-8, 8-11 (1–3)ರಿಂದ ಪಶ್ಚಿಮ ಬಂಗಾಲದ ಅಂಕುರ್ ಭಟ್ಟಾಚಾರ್ಯ ವಿರುದ್ಧ ಪರಾಭವಗೊಂಡು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಆಕಾಶ್ ಆರಂಭಿಕ ಸುತ್ತಿನಲ್ಲಿ 3–2ರಿಂದ ಹರಿಯಾಣದ ರಿಷಭ್ ಮಯಂಕ್ ಅವರನ್ನು, ಎರಡನೇ ಸುತ್ತಿನಲ್ಲಿ 3–2ರಿಂದ ಮಹಾರಾಷ್ಟ್ರದ ಜಶ್ ಮೋದಿ ಅವರನ್ನು, ಕ್ವಾರ್ಟರ್ ಫೈನಲ್ನಲ್ಲಿ 3–1ರಿಂದ ತಮಿಳುನಾಡಿನ ಮುತ್ತು ರಾಜಶೇಖರನ್ ಬಾಲಮುರಗನ್ ಅವರನ್ನು ಮಣಿಸಿದ್ದರು.