ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್‌ ಟೆನಿಸ್‌‌: ಆಕಾಶ್‌ಗೆ ಕಂಚು

Published 24 ನವೆಂಬರ್ 2023, 13:03 IST
Last Updated 24 ನವೆಂಬರ್ 2023, 13:03 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕೆ.ಜೆ. ಆಕಾಶ್‌ ಅವರು ವಡೋದರದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ರಾಷ್ಟ್ರೀಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕಂಚು ಗೆದ್ದಿದ್ದಾರೆ.

ಸೆಮಿಫೈನಲ್‌ನಲ್ಲಿ ಆಕಾಶ್‌ 5-11, 5-11, 11-8, 8-11 (1–3)ರಿಂದ ಪಶ್ಚಿಮ ಬಂಗಾಲದ ಅಂಕುರ್‌ ಭಟ್ಟಾಚಾರ್ಯ ವಿರುದ್ಧ ಪರಾಭವಗೊಂಡು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಆಕಾಶ್‌ ಆರಂಭಿಕ ಸುತ್ತಿನಲ್ಲಿ 3–2ರಿಂದ ಹರಿಯಾಣದ ರಿಷಭ್ ಮಯಂಕ್‌ ಅವರನ್ನು, ಎರಡನೇ ಸುತ್ತಿನಲ್ಲಿ 3–2ರಿಂದ ಮಹಾರಾಷ್ಟ್ರದ ಜಶ್‌ ಮೋದಿ ಅವರನ್ನು, ಕ್ವಾರ್ಟರ್‌ ಫೈನಲ್‌ನಲ್ಲಿ 3–1ರಿಂದ ತಮಿಳುನಾಡಿನ ಮುತ್ತು ರಾಜಶೇಖರನ್ ಬಾಲಮುರಗನ್ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT