<p><strong>ಚೆನ್ನೈ</strong>: ಮೆಕ್ಸಿಕೊ ಸಿಟಿಯಲ್ಲಿ ನಡೆಯಲಿರುವ ಫಿಡೆ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಭಾರತದ ಕೆಲವು ಸ್ಪರ್ಧಿಗಳಿಗೆ ವೀಸಾ ಲಭಿಸದ ಕಾರಣ ಪ್ರಯಾಣ ವಿಳಂಬವಾಗುವ ಸಾಧ್ಯತೆಯಿದೆ.</p>.<p>ಭಾರತದ ಸ್ಪರ್ಧಿಗಳು ಸೋಮವಾರ ಮೆಕ್ಸಿಕೊಗೆ ಪ್ರಯಾಣ ಬೆಳೆಸಲಿದ್ದು, ಭಾನುವಾರದವರೆಗೂ ಕೆಲವರಿಗೆ ವೀಸಾ ಲಭಿಸಿಲ್ಲ. ಟೂರ್ನಿ ಬುಧವಾರ ಆರಂಭವಾಗಲಿದೆ.</p>.<p>‘ಸ್ಪರ್ಧಿಗಳ ಪ್ರಯಾಣಕ್ಕೆ ಭಾರತ ಸರ್ಕಾರ ಅನುಮತಿ ನೀಡಿದೆ. ಆದರೆ ಮೆಕ್ಸಿಕೊ ರಾಯಭಾರ ಕಚೇರಿಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದರಿಂದ ವೀಸಾ ಲಭಿಸುವುದು ವಿಳಂಬವಾಗಿದೆ’ ಎಂದು ಫಿಡೆ ಸಲಹಾ ಮಂಡಳಿ ಮುಖ್ಯಸ್ಥ ಭರತ್ ಸಿಂಗ್ ಚೌಹಾನ್ ಹೇಳಿದ್ದಾರೆ.</p>.<p>‘ಭಾರತ ತಂಡವು ಸೋಮವಾರ ಪ್ರಯಾಣ ಬೆಳೆಸಲಿದೆ. ಆದರೆ ಕೊನೆಯ ದಿನದವರೆಗೂ (ಭಾನುವಾರ) ವೀಸಾ ಲಭಿಸಿಲ್ಲ. ನಿಗದಿತ ಅವಧಿಯೊಳಗೆ ವೀಸಾ ಲಭಿಸುವ ಖಚಿತತೆಯೂ ಇಲ್ಲ’ ಎಂದು ಅಸಮಾಧಾನ ಹೊರಹಾಕಿದ್ಧಾರೆ.</p>.<p>ವೃಶಾಂಕ್ ಚೌಹಾನ್, ಅರುಣ್ ಕಟಾರಿಯ, ಭಾಗ್ಯಶ್ರೀ ಪಾಟೀಲ್, ಪ್ರಣೀತ್ ವಿ., ಫೆಮಿಲ್ ಚೆಲ್ಲದುರೈ ಮತ್ತು ಕೋಚ್ಗಳಾದ ಪ್ರವೀಣ್ ತಿಪ್ಸೆ ಹಾಗೂ ಕಿರಣ್ ಅಗರವಾಲ್ ಅವರಿಗೆ ಇನ್ನೂ ವೀಸಾ ಲಭಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಮೆಕ್ಸಿಕೊ ಸಿಟಿಯಲ್ಲಿ ನಡೆಯಲಿರುವ ಫಿಡೆ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಭಾರತದ ಕೆಲವು ಸ್ಪರ್ಧಿಗಳಿಗೆ ವೀಸಾ ಲಭಿಸದ ಕಾರಣ ಪ್ರಯಾಣ ವಿಳಂಬವಾಗುವ ಸಾಧ್ಯತೆಯಿದೆ.</p>.<p>ಭಾರತದ ಸ್ಪರ್ಧಿಗಳು ಸೋಮವಾರ ಮೆಕ್ಸಿಕೊಗೆ ಪ್ರಯಾಣ ಬೆಳೆಸಲಿದ್ದು, ಭಾನುವಾರದವರೆಗೂ ಕೆಲವರಿಗೆ ವೀಸಾ ಲಭಿಸಿಲ್ಲ. ಟೂರ್ನಿ ಬುಧವಾರ ಆರಂಭವಾಗಲಿದೆ.</p>.<p>‘ಸ್ಪರ್ಧಿಗಳ ಪ್ರಯಾಣಕ್ಕೆ ಭಾರತ ಸರ್ಕಾರ ಅನುಮತಿ ನೀಡಿದೆ. ಆದರೆ ಮೆಕ್ಸಿಕೊ ರಾಯಭಾರ ಕಚೇರಿಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದರಿಂದ ವೀಸಾ ಲಭಿಸುವುದು ವಿಳಂಬವಾಗಿದೆ’ ಎಂದು ಫಿಡೆ ಸಲಹಾ ಮಂಡಳಿ ಮುಖ್ಯಸ್ಥ ಭರತ್ ಸಿಂಗ್ ಚೌಹಾನ್ ಹೇಳಿದ್ದಾರೆ.</p>.<p>‘ಭಾರತ ತಂಡವು ಸೋಮವಾರ ಪ್ರಯಾಣ ಬೆಳೆಸಲಿದೆ. ಆದರೆ ಕೊನೆಯ ದಿನದವರೆಗೂ (ಭಾನುವಾರ) ವೀಸಾ ಲಭಿಸಿಲ್ಲ. ನಿಗದಿತ ಅವಧಿಯೊಳಗೆ ವೀಸಾ ಲಭಿಸುವ ಖಚಿತತೆಯೂ ಇಲ್ಲ’ ಎಂದು ಅಸಮಾಧಾನ ಹೊರಹಾಕಿದ್ಧಾರೆ.</p>.<p>ವೃಶಾಂಕ್ ಚೌಹಾನ್, ಅರುಣ್ ಕಟಾರಿಯ, ಭಾಗ್ಯಶ್ರೀ ಪಾಟೀಲ್, ಪ್ರಣೀತ್ ವಿ., ಫೆಮಿಲ್ ಚೆಲ್ಲದುರೈ ಮತ್ತು ಕೋಚ್ಗಳಾದ ಪ್ರವೀಣ್ ತಿಪ್ಸೆ ಹಾಗೂ ಕಿರಣ್ ಅಗರವಾಲ್ ಅವರಿಗೆ ಇನ್ನೂ ವೀಸಾ ಲಭಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>