<p><strong>ನವದೆಹಲಿ:</strong> ಭಾರತ ಶೂಟಿಂಗ್ ತಂಡದ ವಿದೇಶಿ ಕೋಚ್ ಪವೆಲ್ ಸ್ಮಿರ್ನೋವ್ ಅವರ ವಿಸಾಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು ಕ್ರೊವೇಷಿಯಾದಲ್ಲಿರುವ ತಂಡವನ್ನು ಶುಕ್ರವಾರ ಸೇರಿಕೊಳ್ಳಲಿದ್ದಾರೆ. ಸಮರೇಶ್ ಜಂಗ್ ಮತ್ತು ರೋನಕ್ ಪಂಡಿತ್ ತಿಂಗಳಾಂತ್ಯದಲ್ಲಿ ಸ್ಮಿರ್ನೋವ್ಗೆ ನೆರವಾಗಲಿದ್ದಾರೆ.</p>.<p>ವಿಸಾ ಲಭಿಸಲು ತಡವಾದ ಕಾರಣ ತಂಡದೊಂದಿಗೆ ಸ್ಮಿರ್ನೋವ್ ಕಳೆದ ವಾರ ತೆರಳಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದೆ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದ್ದಾರೆ.</p>.<p>2012ರ ಲಂಡನ್ ಒಲಿಂಪಿಕ್ಸ್ನ 25 ಮೀಟರ್ಸ್ ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ವಿಜಯಕುಮಾರ್ ಅವರಿಗೆ ಸ್ಮಿರ್ನೋವ್ ತರಬೇತಿ ನೀಡಿದ್ದರು. ನಂತರ ಅವರನ್ನು ರಾಷ್ಟ್ರೀಯ ಪಿಸ್ತೂಲು ತಂಡದ ಕೋಚ್ ಆಗಿ ನೇಮಕ ಮಾಡಲಾಗಿತ್ತು.</p>.<p>ಭಾರತ ತಂಡ ಸದ್ಯ ಕ್ರೊವೇಷಿಯಾ ರಾಜಧಾನಿಯಲ್ಲಿದ್ದು ಗುರುವಾರ ಆರಂಭವಾಗಲಿರುವ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಅತಿಥಿ ಶೂಟರ್ಗಳಾಗಿ ಪಾಲ್ಗೊಳ್ಳುವರು. ನಂತರ ಜೂನ್ 22ರಿಂದ ನಡೆಯಲಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾಗವಹಿಸುವರು. ಅಲ್ಲಿಂದ ನೇರವಾಗಿ ಟೋಕಿಯೊಗೆ ಪಯಣಿಸಲಿದ್ದಾರೆ.</p>.<p>ಪಿಸ್ತೂಲ್ ತಂಡದಲ್ಲಿ ಮನು ಭಾಕರ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಯಶಸ್ವಿನಿ ಸಿಂಗ್ ದೇಸ್ವಾಲ ಮತ್ತು ರಾಹಿ ಸರ್ನೊಬತ್ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ಶೂಟಿಂಗ್ ತಂಡದ ವಿದೇಶಿ ಕೋಚ್ ಪವೆಲ್ ಸ್ಮಿರ್ನೋವ್ ಅವರ ವಿಸಾಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು ಕ್ರೊವೇಷಿಯಾದಲ್ಲಿರುವ ತಂಡವನ್ನು ಶುಕ್ರವಾರ ಸೇರಿಕೊಳ್ಳಲಿದ್ದಾರೆ. ಸಮರೇಶ್ ಜಂಗ್ ಮತ್ತು ರೋನಕ್ ಪಂಡಿತ್ ತಿಂಗಳಾಂತ್ಯದಲ್ಲಿ ಸ್ಮಿರ್ನೋವ್ಗೆ ನೆರವಾಗಲಿದ್ದಾರೆ.</p>.<p>ವಿಸಾ ಲಭಿಸಲು ತಡವಾದ ಕಾರಣ ತಂಡದೊಂದಿಗೆ ಸ್ಮಿರ್ನೋವ್ ಕಳೆದ ವಾರ ತೆರಳಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದೆ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದ್ದಾರೆ.</p>.<p>2012ರ ಲಂಡನ್ ಒಲಿಂಪಿಕ್ಸ್ನ 25 ಮೀಟರ್ಸ್ ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ವಿಜಯಕುಮಾರ್ ಅವರಿಗೆ ಸ್ಮಿರ್ನೋವ್ ತರಬೇತಿ ನೀಡಿದ್ದರು. ನಂತರ ಅವರನ್ನು ರಾಷ್ಟ್ರೀಯ ಪಿಸ್ತೂಲು ತಂಡದ ಕೋಚ್ ಆಗಿ ನೇಮಕ ಮಾಡಲಾಗಿತ್ತು.</p>.<p>ಭಾರತ ತಂಡ ಸದ್ಯ ಕ್ರೊವೇಷಿಯಾ ರಾಜಧಾನಿಯಲ್ಲಿದ್ದು ಗುರುವಾರ ಆರಂಭವಾಗಲಿರುವ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಅತಿಥಿ ಶೂಟರ್ಗಳಾಗಿ ಪಾಲ್ಗೊಳ್ಳುವರು. ನಂತರ ಜೂನ್ 22ರಿಂದ ನಡೆಯಲಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾಗವಹಿಸುವರು. ಅಲ್ಲಿಂದ ನೇರವಾಗಿ ಟೋಕಿಯೊಗೆ ಪಯಣಿಸಲಿದ್ದಾರೆ.</p>.<p>ಪಿಸ್ತೂಲ್ ತಂಡದಲ್ಲಿ ಮನು ಭಾಕರ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಯಶಸ್ವಿನಿ ಸಿಂಗ್ ದೇಸ್ವಾಲ ಮತ್ತು ರಾಹಿ ಸರ್ನೊಬತ್ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>