ಮುಲ್ಹೈಮ್ ಆನ್ ಡೆರ್ ರುಹ್ರ್ (ಜರ್ಮನಿ) : ಭಾರತದ ಶಂಕರ್ ಮುತ್ತುಸ್ವಾಮಿ ಅವರು ಜರ್ಮನ್ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾಲಿಫೈಯರ್ ಪಂದ್ಯಗಳನ್ನು ಗೆದ್ದು, ಪ್ರಧಾನ ಸುತ್ತು ಪ್ರವೇಶಿಸಿದರು.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯ ಕ್ವಾಲಿಫೈಯರ್ನ ಮೊದಲ ಪಂದ್ಯದಲ್ಲಿ 20 ವರ್ಷದ ಶಂಕರ್ ಅವರು 21-17, 21-10 ರಿಂದ ಜರ್ಮನಿಯ ಕೈ ಸ್ಕೇಫರ್ ವಿರುದ್ಧ ಗೆಲುವು ಸಾಧಿಸಿದರು.
ನಂತರ ನಡೆದ ಎರಡನೇ ಪಂದ್ಯದಲ್ಲಿ ಅವರು 21-11 21-18 ರಿಂದ ಸ್ವಿಟ್ಜರ್ಲೆಂಡ್ನ ಟೋಬಿಯಾಸ್ ಕುಯೆಂಜಿ ವಿರುದ್ಧ ಮೇಲುಗೈ ಸಾಧಿಸಿದರು.
ಶಂಕರ್ ಅವರು ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಬ್ರಿಯಾನ್ ಯಾಂಗ್ (ಕೆನಡಾ) ಅವರನ್ನು ಎದುರಿಸಲಿದ್ದಾರೆ.