ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಸಿಯವರೇ ಜೋಕ್ ಮಾಡ್ತಿದ್ದೀರಾ: ಕಶ್ಯಪ್ ಕಿಡಿ

Last Updated 20 ಮಾರ್ಚ್ 2020, 5:24 IST
ಅಕ್ಷರ ಗಾತ್ರ

ನವದೆಹಲಿ: ‘ತರಬೇತಿಯನ್ನು ಮುಂದುವರಿಸಿ ಎಂದು ಕ್ರೀಡಾಪಟುಗಳಿಗೆ ಹೇಳುತ್ತಿರುವ ಐಒಸಿ ಜೋಕ್ ಮಾಡುತ್ತಿದೆಯೇ?’ ಎಂದು ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ತರಬೇತಿ ಕೇಂದ್ರಗಳು, ಕ್ರೀಡಾಂಗಣಗಳ ಬಾಗಿಲುಗಳು ಮುಚ್ಚಿವೆ. ಆದರೆ ಗುರುವಾರ ಹೇಳಿಕೆ ನೀಡಿರುವ ಐಒಸಿಯು, ನಿಗದಿತ ಸಮದಯಲ್ಲೇ ಒಲಿಂಪಿಕ್ಸ್ ನಡೆಯಲಿದೆ. ತರಬೇತಿಯನ್ನು ಮುಂದುವರಿಸಿ ಎಂದಿದೆ.

ಇದರಿಂದ ಕೆರಳಿರುವ ಕಶ್ಯಪ್, ‘ಮೊದಲನೇಯದಾಗಿ ಮುಂಬರುವ ಒಲಿಂಪಿಕ್ಸ್‌ಗೆ ತಂಡವನ್ನು ಆಯ್ಕೆ ಮಾಡಿಲ್ಲ. ಆಯ್ಕೆ ಪ್ರಕ್ರಿಯೆಗಳೂ ಪೂರ್ಣವಾಗಿಲ್ಲ. ಈಗಾಗಲೇ ಆಯ್ಕೆಯಾದವರಿಗ ಅಭ್ಯಾಸ ಮಾಡಲು ಸ್ಥಳವೆಲ್ಲಿದೆ? ಎಲ್ಲ ಅಕಾಡೆಮಿಗಳಿಗೂ ಬೀಗ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಐಒಸಿಯು ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಅವರು ಈಚೆಗೆ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ಅಲ್ಲಿಂದ ಮರಳಿದ ನಂತರ ಕ್ವಾರಂಟೈನ್‌ಗೆ (ಏಕಾಂತವಾಸ) ಒಳಪಟ್ಟಿದ್ದಾರೆ. ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಕೊರೊನಾ ಭೀತಿಯ ನಡುವೆಯೂ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ನಡೆಸಿದ್ದನ್ನು ಕಶ್ಯಪ್ ಪತ್ನಿ ಮತ್ತು ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರ ಖಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT