<p><strong>ತಿರುವನಂತಪುರಂ:</strong> ಕೇರಳದ ಪ್ರತಿಭಾವಂತ ಯುವ ಬಾಕ್ಸಿಂಗ್ ಪಟುಗಳಿಗೆ ತಮ್ಮ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡುವುದಾಗಿ ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್ ಹೇಳಿದ್ದಾರೆ.</p>.<p>ಮೊದಲ ಬಾರಿಗೆ ನಡೆಯುತ್ತಿರುವ ಕೇರಳ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕಾಗಿ ಇಲ್ಲಿಗೆ ಆಗಮಿಸಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.</p>.<p><a href="https://www.prajavani.net/sports/sports-extra/american-teenager-knighton-becomes-fourth-fastest-man-over-two-hundred-metre-933161.html" itemprop="url">ಬೇಟನ್ ರೇಜ್ ಕ್ರೀಡಾಕೂಟ: 200 ಮೀಟರ್ಸ್ ಓಟದಲ್ಲಿ ನೈಟನ್ ಮಿಂಚು </a></p>.<p>‘ದೇಶಕ್ಕೆ ಕೇರಳ ಹಲವು ಬಾಕ್ಸರ್ಗಳನ್ನು ನೀಡಿದೆ. ಸದ್ಯ ಇಲ್ಲಿ ಉದಯೋನ್ಮುಖ ಬಾಕ್ಸರ್ಗಳ ಕೊರತೆ ಇದೆ. ರಾಜ್ಯದ ಯುವ ಬಾಕ್ಸರ್ಗಳು ಮುಂದೆ ಬಂದರೆ ಅವರಿಗೆ ತರಬೇತಿ ನೀಡಲಾಗುವುದು‘ ಎಂದು ಮೇರಿ ನುಡಿದರು.</p>.<p>ಒಲಿಂಪಿಯನ್ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ರವಿ ದಹಿಯಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ:</strong> ಕೇರಳದ ಪ್ರತಿಭಾವಂತ ಯುವ ಬಾಕ್ಸಿಂಗ್ ಪಟುಗಳಿಗೆ ತಮ್ಮ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡುವುದಾಗಿ ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್ ಹೇಳಿದ್ದಾರೆ.</p>.<p>ಮೊದಲ ಬಾರಿಗೆ ನಡೆಯುತ್ತಿರುವ ಕೇರಳ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕಾಗಿ ಇಲ್ಲಿಗೆ ಆಗಮಿಸಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.</p>.<p><a href="https://www.prajavani.net/sports/sports-extra/american-teenager-knighton-becomes-fourth-fastest-man-over-two-hundred-metre-933161.html" itemprop="url">ಬೇಟನ್ ರೇಜ್ ಕ್ರೀಡಾಕೂಟ: 200 ಮೀಟರ್ಸ್ ಓಟದಲ್ಲಿ ನೈಟನ್ ಮಿಂಚು </a></p>.<p>‘ದೇಶಕ್ಕೆ ಕೇರಳ ಹಲವು ಬಾಕ್ಸರ್ಗಳನ್ನು ನೀಡಿದೆ. ಸದ್ಯ ಇಲ್ಲಿ ಉದಯೋನ್ಮುಖ ಬಾಕ್ಸರ್ಗಳ ಕೊರತೆ ಇದೆ. ರಾಜ್ಯದ ಯುವ ಬಾಕ್ಸರ್ಗಳು ಮುಂದೆ ಬಂದರೆ ಅವರಿಗೆ ತರಬೇತಿ ನೀಡಲಾಗುವುದು‘ ಎಂದು ಮೇರಿ ನುಡಿದರು.</p>.<p>ಒಲಿಂಪಿಯನ್ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ರವಿ ದಹಿಯಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>