<p><strong>ಗುರುಗ್ರಾಮ</strong>: ಹಾಲಿ ಚಾಂಪಿಯನ್ ಭಾರತದ ಖಾಲಿನ್ ಜೋಷಿ, ಪ್ಯಾನಾಸೋನಿಕ್ ಇಂಡಿಯಾ ಓಪನ್ ಗಾಲ್ಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ.</p>.<p>ನವೆಂಬರ್ 14ರಿಂದ 17ರವರೆಗೆ ಇಲ್ಲಿನ ಕ್ಲಾಸಿಕ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಅಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ₹ 2.85 ಕೋಟಿ (40, 0000 ಅಮೆರಿಕನ್ ಡಾಲರ್) ಬಹುಮಾನ ಮೊತ್ತದ ಏಷ್ಯನ್ ಟೂರ್ ಟೂರ್ನಿ ಇದು.</p>.<p>16 ದೇಶಗಳಿಂದ ಗಾಲ್ಫ್ ಪಟುಗಳು ಭಾಗವಹಿಸಲಿದ್ದಾರೆ. 2011ರಲ್ಲಿ ಆರಂಭವಾದ ಈ ಚಾಂಪಿಯನ್ಷಿಪ್ನಲ್ಲಿ ಯಾರೊಬ್ಬರೂ ಎರಡು ಬಾರಿ ಚಾಂಪಿಯನ್ ಆಗಿಲ್ಲ. ಜೋಷಿ ಈ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.</p>.<p>‘ನನ್ನ ಪ್ರಥಮ ಏಷ್ಯನ್ ಟೂರ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ. ನನ್ನ ಆಟದಲ್ಲಿ ಧನಾತ್ಮಕ ಅಂಶ ಕಾಣುತ್ತಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದು ಜೋಷಿ ಹೇಳಿದ್ದಾರೆ.</p>.<p>ಹೋದ ವರ್ಷ ಶ್ರೇಷ್ಠ ಪ್ರದರ್ಶನ ತೋರಿದ್ದ ಜೋಷಿ, ಬಾಂಗ್ಲಾದೇಶದ ಸಿದ್ದೀಕ್ ಉರ್ ರೆಹಮಾನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಗ್ರಾಮ</strong>: ಹಾಲಿ ಚಾಂಪಿಯನ್ ಭಾರತದ ಖಾಲಿನ್ ಜೋಷಿ, ಪ್ಯಾನಾಸೋನಿಕ್ ಇಂಡಿಯಾ ಓಪನ್ ಗಾಲ್ಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ.</p>.<p>ನವೆಂಬರ್ 14ರಿಂದ 17ರವರೆಗೆ ಇಲ್ಲಿನ ಕ್ಲಾಸಿಕ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಅಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ₹ 2.85 ಕೋಟಿ (40, 0000 ಅಮೆರಿಕನ್ ಡಾಲರ್) ಬಹುಮಾನ ಮೊತ್ತದ ಏಷ್ಯನ್ ಟೂರ್ ಟೂರ್ನಿ ಇದು.</p>.<p>16 ದೇಶಗಳಿಂದ ಗಾಲ್ಫ್ ಪಟುಗಳು ಭಾಗವಹಿಸಲಿದ್ದಾರೆ. 2011ರಲ್ಲಿ ಆರಂಭವಾದ ಈ ಚಾಂಪಿಯನ್ಷಿಪ್ನಲ್ಲಿ ಯಾರೊಬ್ಬರೂ ಎರಡು ಬಾರಿ ಚಾಂಪಿಯನ್ ಆಗಿಲ್ಲ. ಜೋಷಿ ಈ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.</p>.<p>‘ನನ್ನ ಪ್ರಥಮ ಏಷ್ಯನ್ ಟೂರ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ. ನನ್ನ ಆಟದಲ್ಲಿ ಧನಾತ್ಮಕ ಅಂಶ ಕಾಣುತ್ತಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದು ಜೋಷಿ ಹೇಳಿದ್ದಾರೆ.</p>.<p>ಹೋದ ವರ್ಷ ಶ್ರೇಷ್ಠ ಪ್ರದರ್ಶನ ತೋರಿದ್ದ ಜೋಷಿ, ಬಾಂಗ್ಲಾದೇಶದ ಸಿದ್ದೀಕ್ ಉರ್ ರೆಹಮಾನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>