<p><strong>ಚೆನ್ನೈ:</strong> ನಾಯಕ ಅಜಯ್ ಠಾಕೂರ್ ಅವರ ಅಮೋಘ ರೈಡಿಂಗ್ನ ನೆರವಿನಿಂದ ತಮಿಳ್ ತಲೈವಾಸ್ ತಂಡದವರು ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಆರನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದ್ದಾರೆ.</p>.<p>ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’ ವಲಯದ ಪಂದ್ಯದಲ್ಲಿ ತಲೈವಾಸ್ 42–26 ಪಾಯಿಂಟ್ಸ್ನಿಂದ ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು ಪರಾಭವಗೊಳಿಸಿತು.</p>.<p>ತಲೈವಾಸ್ ತಂಡದ ನಾಯಕ ಅಜಯ್ 14 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಅಮಿತ್ ಹೂಡಾ ಟ್ಯಾಕ್ಲಿಂಗ್ನಲ್ಲಿ ಮಿಂಚಿದರು.</p>.<p>ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿದಿದ್ದ ತಲೈವಾಸ್ ಆರಂಭದಿಂದಲೇ ಚುರುಕಿನ ಆಟ ಆಡಿತು. ಸುರ್ಜೀತ್ ಸಿಂಗ್ ರೈಡಿಂಗ್ನಲ್ಲಿ ಮೋಡಿ ಮಾಡಿದರು.</p>.<p>ಕರ್ನಾಟಕದ ಜೆ.ದರ್ಶನ್, ಅನುಭವಿಗಳಾದ ಜಸ್ವೀರ್ ಸಿಂಗ್ ಮತ್ತು ಮಂಜೀತ್ ಚಿಲ್ಲಾರ್ ಅವರು ಎದುರಾಳಿ ರೈಡರ್ಗಳನ್ನು ಅಮೋಘ ರೀತಿಯಲ್ಲಿ ಹಿಡಿದು ತವರಿನ ಅಭಿಮಾನಿಗಳನ್ನು ರಂಜಿಸಿದರು.</p>.<p>ಪಟ್ನಾ ತಂಡದ ನಾಯಕ ಪ್ರದೀಪ್ ನರ್ವಾಲ್ ಮತ್ತು ಮಂಜೀತ್ ಅವರು ರೈಡಿಂಗ್ನಲ್ಲಿ ಮಿಂಚಿದರು. ಆದರೆ ರಕ್ಷಣಾ ವಿಭಾಗದಲ್ಲಿ ಮಾಡಿಕೊಂಡ ಎಡವಟ್ಟುಗಳು ಈ ತಂಡದ ಗೆಲುವಿನ ಕನಸಿಗೆ ಮುಳುವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ನಾಯಕ ಅಜಯ್ ಠಾಕೂರ್ ಅವರ ಅಮೋಘ ರೈಡಿಂಗ್ನ ನೆರವಿನಿಂದ ತಮಿಳ್ ತಲೈವಾಸ್ ತಂಡದವರು ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಆರನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದ್ದಾರೆ.</p>.<p>ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’ ವಲಯದ ಪಂದ್ಯದಲ್ಲಿ ತಲೈವಾಸ್ 42–26 ಪಾಯಿಂಟ್ಸ್ನಿಂದ ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು ಪರಾಭವಗೊಳಿಸಿತು.</p>.<p>ತಲೈವಾಸ್ ತಂಡದ ನಾಯಕ ಅಜಯ್ 14 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಅಮಿತ್ ಹೂಡಾ ಟ್ಯಾಕ್ಲಿಂಗ್ನಲ್ಲಿ ಮಿಂಚಿದರು.</p>.<p>ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿದಿದ್ದ ತಲೈವಾಸ್ ಆರಂಭದಿಂದಲೇ ಚುರುಕಿನ ಆಟ ಆಡಿತು. ಸುರ್ಜೀತ್ ಸಿಂಗ್ ರೈಡಿಂಗ್ನಲ್ಲಿ ಮೋಡಿ ಮಾಡಿದರು.</p>.<p>ಕರ್ನಾಟಕದ ಜೆ.ದರ್ಶನ್, ಅನುಭವಿಗಳಾದ ಜಸ್ವೀರ್ ಸಿಂಗ್ ಮತ್ತು ಮಂಜೀತ್ ಚಿಲ್ಲಾರ್ ಅವರು ಎದುರಾಳಿ ರೈಡರ್ಗಳನ್ನು ಅಮೋಘ ರೀತಿಯಲ್ಲಿ ಹಿಡಿದು ತವರಿನ ಅಭಿಮಾನಿಗಳನ್ನು ರಂಜಿಸಿದರು.</p>.<p>ಪಟ್ನಾ ತಂಡದ ನಾಯಕ ಪ್ರದೀಪ್ ನರ್ವಾಲ್ ಮತ್ತು ಮಂಜೀತ್ ಅವರು ರೈಡಿಂಗ್ನಲ್ಲಿ ಮಿಂಚಿದರು. ಆದರೆ ರಕ್ಷಣಾ ವಿಭಾಗದಲ್ಲಿ ಮಾಡಿಕೊಂಡ ಎಡವಟ್ಟುಗಳು ಈ ತಂಡದ ಗೆಲುವಿನ ಕನಸಿಗೆ ಮುಳುವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>