<p>ಪ್ರಜಾವಾಣಿ ವಾರ್ತೆ</p>.<p><strong>ಬೆಂಗಳೂರು</strong>: ಕೇಂದ್ರ ಜಿಎಸ್ಟಿ ಮತ್ತು ಕಸ್ಟಮ್ಸ್ ಕ್ರೀಡೆ ಹಾಗೂ ಸಾಂಸ್ಕೃತಿಕ ಕಲ್ಯಾಣ ಸಂಘಟನೆ ‘ಸಂಪ್ರಭ’ದ ಆಶ್ರಯದಲ್ಲಿ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 120 ಜನರು ರಕ್ತದಾನ ಮಾಡಿದರು. </p>.<p>ಸಂಘಟನೆಯ ಸಮಾಜ ಸೇವಾ ಯೋಜನೆಯ ಅಂಗವಾಗಿ ಕೋರಮಂಗಲದ ಕೇಂದ್ರಿಯ ಸದನದಲ್ಲಿ ಶಿಬಿರ ನಡೆಯಿತು. ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ತಂಡವು ಶಿಬಿರ ನಿರ್ವಹಿಸಿತು.</p>.<p>ಇದೇ ಸಂದರ್ಭದಲ್ಲಿ ಎಸ್ಐಎಂಎಸ್ ಸಂಸ್ಥೆಯ ವಿಧಿವಿಜ್ಞಾನ ಔಷಧ ತಜ್ಞ ಮತ್ತು ಪ್ರಾಧ್ಯಾಪಕ ಡಾ. ದೇವದಾಸ್ ಅವರು ಅಂಗಾಂಗ ದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.</p>.<p>ಸಂಪ್ರಭ ಸಂಸ್ಥೆಯ ಮುಖ್ಯಸ್ಥರಾದ, ನಿವೃತ್ತ ಐ.ಆರ್.ಎಸ್ ಅಧಿಕಾರಿ ಜಿ. ನಾರಾಯಣಸ್ವಾಮಿ, ಎಡಿಜಿ, ಸಿಪಿಡಬ್ಲ್ಯುಡಿ ಎನ್.ಎನ್.ಎಸ್.ಎಸ್. ರಾವ್, ಜಂಟಿ ಆಯುಕ್ತ ಶ್ರೇಯಸ್ ಅವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಬೆಂಗಳೂರು</strong>: ಕೇಂದ್ರ ಜಿಎಸ್ಟಿ ಮತ್ತು ಕಸ್ಟಮ್ಸ್ ಕ್ರೀಡೆ ಹಾಗೂ ಸಾಂಸ್ಕೃತಿಕ ಕಲ್ಯಾಣ ಸಂಘಟನೆ ‘ಸಂಪ್ರಭ’ದ ಆಶ್ರಯದಲ್ಲಿ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 120 ಜನರು ರಕ್ತದಾನ ಮಾಡಿದರು. </p>.<p>ಸಂಘಟನೆಯ ಸಮಾಜ ಸೇವಾ ಯೋಜನೆಯ ಅಂಗವಾಗಿ ಕೋರಮಂಗಲದ ಕೇಂದ್ರಿಯ ಸದನದಲ್ಲಿ ಶಿಬಿರ ನಡೆಯಿತು. ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ತಂಡವು ಶಿಬಿರ ನಿರ್ವಹಿಸಿತು.</p>.<p>ಇದೇ ಸಂದರ್ಭದಲ್ಲಿ ಎಸ್ಐಎಂಎಸ್ ಸಂಸ್ಥೆಯ ವಿಧಿವಿಜ್ಞಾನ ಔಷಧ ತಜ್ಞ ಮತ್ತು ಪ್ರಾಧ್ಯಾಪಕ ಡಾ. ದೇವದಾಸ್ ಅವರು ಅಂಗಾಂಗ ದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.</p>.<p>ಸಂಪ್ರಭ ಸಂಸ್ಥೆಯ ಮುಖ್ಯಸ್ಥರಾದ, ನಿವೃತ್ತ ಐ.ಆರ್.ಎಸ್ ಅಧಿಕಾರಿ ಜಿ. ನಾರಾಯಣಸ್ವಾಮಿ, ಎಡಿಜಿ, ಸಿಪಿಡಬ್ಲ್ಯುಡಿ ಎನ್.ಎನ್.ಎಸ್.ಎಸ್. ರಾವ್, ಜಂಟಿ ಆಯುಕ್ತ ಶ್ರೇಯಸ್ ಅವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>