ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹಾಕಿ: ರಂಜಿತ್ ಮಿಂಚು

Last Updated 31 ಜನವರಿ 2023, 19:34 IST
ಅಕ್ಷರ ಗಾತ್ರ

ಬೆಂಗಳೂರು: ರಂಜಿತ್ ಚಂದ್‌ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಗುರು ಹಾಕಿ ಕ್ಲಬ್ ತಂಡವು ಕೆಎಸ್‌ಎಚ್‌ಎ ಎ ಡಿವಿಷನ್‌ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಗುರು ಕ್ಲಬ್‌ 7–2ರಿಂದ ಎಚ್‌ಎಂಟಿ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಗಂಗಾಧರ್ ರೆಡ್ಡಿ 4ನೇ ನಿಮಿಷ, ರಂಜಿತ್ 8, 31, 37 ಮತ್ತು 50ನೇ ನಿಮಿಷಗಳಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಮಹೇಶ್ ರೆಡ್ಡಿ (33ನೇ ನಿ.) ಮತ್ತು ರಾಮ್‌ಕುಮಾರ್ (40ನೇ ನಿ.) ತಲಾ ಒಂದು ಗೋಲು ದಾಖಲಿಸಿದರು. ಎಚ್‌ಎಂಟಿ ಪರ ತೇಸ್ವಿನ್‌ (35ನೇ ನಿ.) ಮತ್ತು ಅಖಿಲ್‌ (44ನೇ ನಿ.) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ತಂಡವು 5–1ರಿಂದ ಯಂಗ್‌ಸ್ಟಾರ್ ಕ್ಲಬ್‌, ರಾಯಚೂರು ಎದುರು ಗೆದ್ದಿತು.

ಎ ಡಿವಿಷನ್‌ ಪಂದ್ಯಗಳು ಮಂಗಳವಾರ ಮುಕ್ತಾಯವಾಗಿದ್ದು, ಕರ್ನಾಟಕ ಅರಣ್ಯ ಇಲಾಖೆ ತಂಡವು ಮೊದಲ ಸ್ಥಾನ ಗಳಿಸಿತು. ಯಂಗ್‌ಸ್ಟಾರ್ ಎರಡು ಮತ್ತು ಗುರು ಕ್ಲಬ್ ಮೂರನೇ ಸ್ಥಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT