<p><strong>ನವದೆಹಲಿ:</strong> ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ತಮ್ಮ ತಲೆಗೆ ಆಗಿದ್ದ ಗಾಯಕ್ಕೆ ಸ್ಥಳದಲ್ಲಿದ್ದ ವೈದ್ಯರು ಪಟ್ಟಿಯನ್ನು ಬಿಗಿಯಾಗಿ ಕಟ್ಟಿದ್ದರಿಂದ ಏಕಾಗ್ರತೆಗೆ ಭಂಗವಾಯಿತು ಎಂದು ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ವಿಶ್ವ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಜರಂಗ್ ಈ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವ್ಲಾಡೆಸ್ ಟೊಬೀರ್ ವಿರುದ್ಧ ಸೆಣಸಿದ್ದರು. ಈ ಸಂದರ್ಭದಲ್ಲಿ ಬಜರಂಗ್ ತಲೆಗೆ ಗಾಯವಾಗಿ ರಕ್ತ ಸುರಿಯಿತು.</p>.<p>ಆಗ ಸ್ಥಳದಲ್ಲಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದರು. ರಿಜಿಡ್ ಟೇಪ್ ಕಟ್ಟಿದ್ದರು. ಟೆನಿಸ್ ಹಾಗೂ ಬ್ಯಾಸ್ಕೆಟ್ಬಾಲ್ ಆಟಗಾರರಿಗೆ ಗಾಯವಾದಾಗ ಈ ರೀತಿಯ ಟೇಪ್ ಬಳಸಲಾಗುತ್ತದೆ. ಅದರಲ್ಲೂ ಮೊಣಕಾಲು ಮತ್ತು ಪಾದಕ್ಕೆ ಗಾಯವಾದಾಗ ಬಳಸುತ್ತಾರೆನ್ನಲಾಗಿದೆ.</p>.<p>‘ಅವರು ಈ ರೀತಿಯಾಗಿ ಯಾಕೆ ಮಾಡಿದರೋ ದೇವರಿಗೇ ಗೊತ್ತು. ಆದರೆ ಅದರಿಂದಾಗಿ ಗಾಯದ ಜಾಗದಲ್ಲಿ ವಿಪರೀತ ಉರಿತ ಉಂಟಾಯಿತು. ಅದರಿಂದಾಗಿ ಆ ಜಾಗದಲ್ಲಿದ್ದ ಕೂದಲುಗಳನ್ನು ಕತ್ತರಿಸಬೇಕಾಯಿತು. ಇದರಿಂದಾಗಿ ಸುಮಾರು 20 ನಿಮಿಷಗಳು ವ್ಯರ್ಥವಾದವು’ ಎಂದು ಬಜರಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ತಮ್ಮ ತಲೆಗೆ ಆಗಿದ್ದ ಗಾಯಕ್ಕೆ ಸ್ಥಳದಲ್ಲಿದ್ದ ವೈದ್ಯರು ಪಟ್ಟಿಯನ್ನು ಬಿಗಿಯಾಗಿ ಕಟ್ಟಿದ್ದರಿಂದ ಏಕಾಗ್ರತೆಗೆ ಭಂಗವಾಯಿತು ಎಂದು ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ವಿಶ್ವ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಜರಂಗ್ ಈ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವ್ಲಾಡೆಸ್ ಟೊಬೀರ್ ವಿರುದ್ಧ ಸೆಣಸಿದ್ದರು. ಈ ಸಂದರ್ಭದಲ್ಲಿ ಬಜರಂಗ್ ತಲೆಗೆ ಗಾಯವಾಗಿ ರಕ್ತ ಸುರಿಯಿತು.</p>.<p>ಆಗ ಸ್ಥಳದಲ್ಲಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದರು. ರಿಜಿಡ್ ಟೇಪ್ ಕಟ್ಟಿದ್ದರು. ಟೆನಿಸ್ ಹಾಗೂ ಬ್ಯಾಸ್ಕೆಟ್ಬಾಲ್ ಆಟಗಾರರಿಗೆ ಗಾಯವಾದಾಗ ಈ ರೀತಿಯ ಟೇಪ್ ಬಳಸಲಾಗುತ್ತದೆ. ಅದರಲ್ಲೂ ಮೊಣಕಾಲು ಮತ್ತು ಪಾದಕ್ಕೆ ಗಾಯವಾದಾಗ ಬಳಸುತ್ತಾರೆನ್ನಲಾಗಿದೆ.</p>.<p>‘ಅವರು ಈ ರೀತಿಯಾಗಿ ಯಾಕೆ ಮಾಡಿದರೋ ದೇವರಿಗೇ ಗೊತ್ತು. ಆದರೆ ಅದರಿಂದಾಗಿ ಗಾಯದ ಜಾಗದಲ್ಲಿ ವಿಪರೀತ ಉರಿತ ಉಂಟಾಯಿತು. ಅದರಿಂದಾಗಿ ಆ ಜಾಗದಲ್ಲಿದ್ದ ಕೂದಲುಗಳನ್ನು ಕತ್ತರಿಸಬೇಕಾಯಿತು. ಇದರಿಂದಾಗಿ ಸುಮಾರು 20 ನಿಮಿಷಗಳು ವ್ಯರ್ಥವಾದವು’ ಎಂದು ಬಜರಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>