ಚಂಡೀಗಡ (ಪಿಟಿಐ):ಟೋಕಿಯೊ ಒಲಿಂಪಿಕ್ಸ್ ಕುಸ್ತಿಯಲ್ಲಿ ಬೆಳ್ಳಿಪದಕ ಜಯಿಸಿದ ರವಿಕುಮಾರ್ ದಹಿಯಾ ಅವರ ಸೋನಿಪತ್ ಸಮೀಪದ ನಹ್ರಿಯಲ್ಲಿರುವ ಮನೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ನಹ್ರಿ ಗ್ರಾಮ ಪಂಚಾಯಿತಿಯವರು ಊರಿನಲ್ಲಿರುವ ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಖಟ್ಟರ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಅದನ್ನು ಸ್ವೀಕರಿಸಿದ ಪರಿಹಾರ ಕಾರ್ಯಗಳಿಗೆ ಕೂಡಲೇ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.