ನವದೆಹಲಿ: ಕೊರೊನಾ ಸೃಷ್ಣಿಸಿರುವ ತಲ್ಲಣದ ನಡುವೆಯೇ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ ನಿಗದಿತ ಸಮಯಕ್ಕೆ ನಡೆಸಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿದೆ. ಇದೇ ವೇಳೆ ಭಾರತದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ನಿಗದಿತ ದಿನಾಂಕಗಳಂತೆ ಕೂಟ ನಡೆಯಲಿ ಎಂದಿದ್ದಾರೆ. ಒಂದು ವೇಳೆ ನಡೆಯದಿದ್ದರೆ ಮೊದಲ ಬಾರಿ ಪದಕ ಗೆಲ್ಲಲು ತಾನು ಪಡುತ್ತಿರುವ ಶ್ರಮ ವ್ಯರ್ಥವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.