‘ದಿಗ್ಗಜ ವಿಶ್ವನಾಥನ್ ಆನಂದ್, ಕೊನೆರು ಹಂಪಿ, ವಿದಿತ್ ಸಂತೋಷ್ ಗುಜರಾತಿ, ಪಿ. ಹರಿಕೃಷ್ಣ, ದ್ರೋಣವಳ್ಳಿ ಹರಿಕಾ, ಅರವಿಂದ ಚಿದಂಬರಂ, ಭಕ್ತಿ ಕುಲಕರ್ಣಿ, ಆರ್. ವೈಶಾಲಿ, ನಿಹಾಲ್ ಸರಿನ್, ಆರ್. ಪ್ರಜ್ಞಾನಂದ, ದಿವ್ಯಾ ದೇಶಮುಖ ಮತ್ತು ವಂತಿಕಾ ಅಗರವಾಲ್ ಅವರಿದ್ದ ತಂಡವು ಅಮೋಘ ಸಾಧನೆ ಮಾಡಿದೆ. ತಾಂತ್ರಿಕ ಕಾರಣಗಳಿಂದ ರಷ್ಯಾದೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದೆ. ಟೂರ್ನಿಯಲ್ಲಿ ನಮ್ಮ ತಂಡದ ಆಟ ಸರ್ವಶ್ರೇಷ್ಠವಾಗಿತ್ತು’ ಎಂದು ರಾಜಾ ಶ್ಲಾಘಿಸಿದ್ದಾರೆ.