ಬೆಂಗಳೂರು: ಕರ್ನಾಟಕದ ಹಿರಿಯ ವಾಲಿಬಾಲ್ ಆಟಗಾರ ಕೆ.ಎಸ್. ಮಂಜುನಾಥ್ (49) ಕೋವಿಡ್ನಿಂದ ಬುಧವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಜೂನಿಯರ್, ಯುವ ಮತ್ತು ಸೀನಿಯರ್ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.
ಏಜೀಸ್ (ಎಜಿಒಆರ್ಸಿ) ತಂಡವನ್ನು ಹತ್ತು ವರ್ಷ ಪ್ರತಿನಿಧಿಸಿದ್ದರು. ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.